alex Certify ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡಗಳನ್ನು ಇಟ್ಟರೆ ಶ್ರೀಮಂತರಾಗಬಹುದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡಗಳನ್ನು ಇಟ್ಟರೆ ಶ್ರೀಮಂತರಾಗಬಹುದು….!

ಪ್ರತಿ ಮನೆಗಳಲ್ಲೂ ಈಗ ಗಿಡಗಳನ್ನು ಇಡುವ ಹವ್ಯಾಸ ಶುರುವಾಗಿದೆ. ಇದಕ್ಕಾಗಿಯೇ ಇಂಡೋರ್‌ ಪ್ಲಾಂಟ್‌ಗಳು ಕೂಡ ಲಭ್ಯವಿವೆ. ಮರಗಳು ಮತ್ತು ಸಸ್ಯಗಳು ವಿಶೇಷ ಶಕ್ತಿಯನ್ನು ಹೊಂದಿವೆ. ವಾಸ್ತ್ರುಶಾಸ್ತ್ರದಲ್ಲಿ ಸೂಚಿಸಿರುವ ನಿಯಮಗಳ ಪ್ರಕಾರ ಈ ಗಿಡಗಳನ್ನು ಇರಿಸಿದರೆ ಆ ಮನೆಯ ಮೇಲೆ ಲಕ್ಷ್ಮಿ ಕೃಪೆ ತೋರುತ್ತಾಳೆ. ಅವರಿಗೆ ಹಣದ ಕೊರತೆಯೇ ಆಗುವುದಿಲ್ಲ. ಕೆಲವು ಸಸ್ಯಗಳನ್ನು ಉತ್ತರ ದಿಕ್ಕಿನಲ್ಲಿಯೇ ಇಡಬೇಕು. ಅವುಗಳ ಬಗ್ಗೆ ತಿಳಿಯೋಣ.

ಮನೆಯ ಉತ್ತರ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮಿ ಮತ್ತು ಸಂಪತ್ತಿನ ಅಧಿಪತಿ ಕುಬೇರರು ನೆಲೆಸಿದ್ದಾರೆ. ಅದಕ್ಕಾಗಿಯೇ ಈ ದಿಕ್ಕಿನಲ್ಲಿ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ದೇವಿಗೆ ಪ್ರಿಯವಾದ ಗಿಡಗಳನ್ನು ನೆಟ್ಟರೆ ನೀವು ಶ್ರೀಮಂತರಾಗಬಹುದು.

ಮನಿ ಪ್ಲಾಂಟ್‌ : ಹೆಸರೇ ಸೂಚಿಸುವಂತೆ ಇದನ್ನು ಹಣ ನೀಡುವ ಸಸ್ಯ ಎಂದು ಕರೆಯಲಾಗುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಅಥವಾ ಹಸಿರು ಬಣ್ಣದ ಬಾಟಲಿ, ಪಾರದರ್ಶಕ ಹೂದಾನಿಗಳಲ್ಲಿ ಮನಿ ಪ್ಲಾಂಟ್ ಅನ್ನು ನೆಟ್ಟರೆ, ಅದು ಮನೆಯಲ್ಲಿ ಬಹಳಷ್ಟು ಸಂಪತ್ತನ್ನು ತರುತ್ತದೆ. ಆದರೆ ಒಣಗಿದ ಗಿಡ ಮತ್ತು ಎಲೆಗಳನ್ನು ಹಾಗೇ ಬಿಡಬಾರದು.

ತುಳಸಿ : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಮನೆಯ ಉತ್ತರ ದಿಕ್ಕಿಗೆ ತುಳಸಿ ಗಿಡ ನೆಟ್ಟರೆ ಶ್ರೇಯಸ್ಸಾಗುತ್ತದೆ. ತುಳಸಿಯನ್ನು ಪ್ರತಿದಿನ ಪೂಜಿಸಬೇಕು, ಕೊಳಕು ಕೈಗಳಿಂದ ಅದನ್ನು ಮುಟ್ಟಬಾರದು.

ಬಿದಿರು : ವಾಸ್ತು ಶಾಸ್ತ್ರದ ಪ್ರಕಾರ ಬಿದಿರಿನ ಸಸ್ಯವು ಸಂತೋಷ, ಶಾಂತಿ ಮತ್ತು ಪ್ರಗತಿಯನ್ನು ನೀಡುತ್ತದೆ. ಫೆಂಗ್ ಶೂಯಿಯಲ್ಲಿ ಇದನ್ನು ಅದೃಷ್ಟದ ಮೋಡಿ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಸಾಕಷ್ಟು ಪ್ರಗತಿ ಮತ್ತು ಸಂಪತ್ತು ಬರುತ್ತದೆ. ಇದು ಮನೆಯಿಂದ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ.

ಬಾಳೆ ಮರ : ಬಾಳೆ ಮರವು ವಿಷ್ಣುವಿಗೆ ಸಂಬಂಧಿಸಿದೆ. ಮನೆಯಲ್ಲಿ ಬಾಳೆಗಿಡವನ್ನು ನೆಟ್ಟು ಪೂಜಿಸುವುದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ. ಗುರುವಾರದಂದು ಉತ್ತರ ದಿಕ್ಕಿಗೆ ಬಾಳೆಗಿಡವನ್ನು ನೆಟ್ಟು ಅದರ ಕೆಳಗೆ ಪ್ರತಿ ಗುರುವಾರ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸುಖ, ಸೌಭಾಗ್ಯ, ಐಶ್ವರ್ಯ ವೇಗವಾಗಿ ಹೆಚ್ಚುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...