ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾದಾಗ, ವಾಸ್ತು ದೋಷವಿದ್ದಾಗ ಅಷ್ಟದಿಕ್ಕುಗಳಿಂದ ಸಮಸ್ಯೆಗಳು ಬರುತ್ತವೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ, ಇರುವುದಿಲ್ಲ, ಕಲಹ, ಜಗಳಗಳು ಹೆಚ್ಚಾಗುತ್ತದೆ. ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಲು ಆಯಾ ದಿಕ್ಕುಗಳಲ್ಲಿ ಈ ಫೋಟೊಗಳನ್ನು ಇರಿಸಿ.
ದಕ್ಷಿಣ ದಿಕ್ಕನ್ನು ಅಪಮೃತ್ಯು ದಿಕ್ಕು ಎಂದು ಹೇಳುತ್ತಾರೆ. ಹಾಗಾಗಿ ಈ ದಿಕ್ಕಿನಲ್ಲಿ ದಕ್ಷಿಣಾ ಮೂರ್ತಿಯ ಫೋಟೊ ಹಾಗೂ ಕೊಕ್ಕರೆ ಚಿತ್ರವನ್ನು ಹಾಕಿದರೆ ಆಯಸ್ಸು ವೃದ್ಧಿಸುತ್ತದೆ. ಉತ್ತರದ ದಿಕ್ಕಿಗೆ ಹಂಸದ ಫೋಟೊ ಇಟ್ಟರೆ ಶಿವನ ಅನುಗ್ರಹವಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುತ್ತದೆ.
ಪಶ್ಚಿಮ ದಿಕ್ಕಿಗೆ ಶ್ರೀದೇವಿ, ಭೂದೇವಿಯ ಜೊತೆಗೆ ವೆಂಕಟೇಶ್ವರ ಸ್ವಾಮಿಯ ಫೋಟೊ ಹಾಕಿದರೆ ಶನಿ ಕಾಟದಿಂದ ಮುಕ್ತಿ ಸಿಗುತ್ತದೆ. ಮನೆಯ ನೈರುತ್ಯ ದಿಕ್ಕಿಗೆ ಜೋಡಿ ಹಂಸದ ಫೋಟೊ ಹಾಕಿದರೆ ಮದುವೆ ಯೋಗ ಕೂಡಿ ಬರುತ್ತದೆ, ದಂಪತಿಗಳ ನಡುವೆ ಕಲಹ ಕಡಿಮೆಯಾಗಿ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ.