alex Certify ಬೇಸಿಗೆಯ ಬೇಗೆಯಿಂದಾಗುವ ಆಯಾಸಕ್ಕೆ ರಾಮಬಾಣ ʼಮಜ್ಜಿಗೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯ ಬೇಗೆಯಿಂದಾಗುವ ಆಯಾಸಕ್ಕೆ ರಾಮಬಾಣ ʼಮಜ್ಜಿಗೆʼ

ಬಡವರ ಅಮೃತ ಎಂದೇ ಹೇಳಲಾಗುವ ಮಜ್ಜಿಗೆ ಬೇಸಿಗೆ ಕಾಲಕ್ಕೆ ಬೇಕೇ ಬೇಕು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಬಹುದು. ಮಜ್ಜಿಗೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತ ದೋಷಗಳನ್ನು ಶಮನ ಮಾಡುತ್ತದೆ. ಹಾಗೇ ಮಜ್ಜಿಗೆ ಕುಡಿಯುವುದರಿಂದ ಇನ್ನೇನೆಲ್ಲಾ ಉಪಯೋಗಗಳಿವೆ ನೋಡಿ.

* ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಇರುವವರು ಪ್ರತಿದಿನ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಇದು ಹೊಟ್ಟೆಯನ್ನು ತಂಪಾಗಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.

* ಹೊಟ್ಟೆ ನೋವು ಅಜೀರ್ಣದ ತೊಂದರೆ ಇದ್ದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೂಡಲೇ ಕಮ್ಮಿ ಯಾಗುವುದು.

* ಅಸಿಡಿಟಿ, ಎದೆ ಉರಿ ಇರುವವರು ಮಜ್ಜಿಗೆ ಕುಡಿದರೆ ಅದು ಕೂಡ ಹತೋಟಿಗೆ ಬಂದು ರಿಲೀಫ್ ಸಿಗುವುದು.

* ಒಂದು ಚಮಚ ಸಕ್ಕರೆ, ರುಚಿಗೆ ಸ್ವಲ್ಪ ಉಪ್ಪು ಸೇರಿಸಿ ಪ್ರತಿ ದಿನ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.

* ಸಕ್ಕರೆ ಕಾಯಿಲೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ದೇಹದ ಸ್ಥಿತಿ ನಿಯಂತ್ರಣದಲ್ಲಿರುತ್ತದೆ.

* ಬೇಧಿ, ರಕ್ತ ಬೇಧಿ ಹಾಗೂ ಕರುಳಿನಲ್ಲಿ ಆಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಲು ಮಜ್ಜಿಗೆ ರಾಮಬಾಣ.

* ಲಿವರ್ ನಲ್ಲಿರುವ ವಿಷ ಗುಣಗಳನ್ನು ತೆಗೆದು ಹಾಕುವ ಶಕ್ತಿ ಮಜ್ಜಿಗೆಗಿದೆ.

* ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕಬಹುದು.

* ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶವಿದ್ದು ಮೂಳೆಗಳಿಗೆ ಅಗತ್ಯ ಶಕ್ತಿ ನೀಡುವ ಕೆಲಸ ಮಾಡುತ್ತದೆ.

* ಮಜ್ಜಿಗೆ ಕುಡಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...