alex Certify ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ; ಕಲ್ಯಾಣ ಮಂಟಪಕ್ಕೆ ಹೋಗಲಾಗದೇ ರಸ್ತೆ ಮಧ್ಯೆಯೇ ಮದುಮಗ-ಮದುಮಗಳ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ; ಕಲ್ಯಾಣ ಮಂಟಪಕ್ಕೆ ಹೋಗಲಾಗದೇ ರಸ್ತೆ ಮಧ್ಯೆಯೇ ಮದುಮಗ-ಮದುಮಗಳ ಪರದಾಟ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇದರಿಂದ ಕೆಲ ಮಾರ್ಗಗಳಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಮದ್ಯೆ ಕಲ್ಯಾಣ ಮಂಟಪಕ್ಕೆ ಹೋಗಲು ಸಾಧ್ಯವಾಗದೇ ಮದುಮಕ್ಕಳು ರಸ್ತೆ ಮಧ್ಯೆ ಸಿಕ್ಕಿಕೊಂಡ ಘಟನೆ ನಡೆದಿದೆ.

ಮಾಗಡಿ ರಸ್ತೆ ಬಳಿಯಿಂದ ಸುಮನಹಳ್ಳಿ ಜಂಕ್ಶನ್ ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದ್ದು ಮುಂಜಾಗೃತಾ ಕ್ರಮವಾಗಿ ಸುತ್ತಮುತ್ತಲು ವಾಹನ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇದೇ ಮಾರ್ಗವಾಗಿ ಕಲ್ಯಾಣಮಂಟಕ್ಕೆ ಹೋಗಲು ಕಾರಿನಲ್ಲಿ ಬಂದ ಮದುಮಗನನ್ನು ಪೊಲೀಸರು ತಡೆದಿದ್ದಾರೆ.

ನೈಸ್ ರಸ್ತೆ ಜಂಕ್ಷನ್ ಬಳಿ ಪೊಲೀಸರು ವರನ ಕಾರನ್ನು ತಡೆದು ನಿಲ್ಲಿಸಿದ್ದು, ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. ಕಾಲ್ಯಾಣ ಮಂಟಪದಲ್ಲಿ ನಾಳೆ ಮದುವೆಯಿದ್ದು, ಇಂದು ರಿಸಪ್ಶನ್ ಹಿನೆಲೆಯಲ್ಲಿ ಇಂದೇ ಕಲ್ಯಾಣ ಮಂಟಪಕ್ಕೆ ಹೋಗಬೇಕು, ತಡವಾಗುತ್ತಿದೆ ಎಂದು ವರ ಪೊಲೀಸರಿಗೆ ಮನವಿ ಮಾಡಿದ್ದಾನೆ. ಆದರೂ ಪೊಲೀಸರು ಅವಕಾಶ ಕೊಟ್ಟಿಲ್ಲ. ಬಳಿಕ ವರನ ಕುಟುಂಬದವರು, ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಲಾಟೆಯಾಗಬಹುದು ಎಂಬ ಕಾರಣಕ್ಕೆ ಬ್ಯಾರಿಕೆಡ್ ತೆರವು ಮಾಡಿ ವರ ಹಾಗೂ ಕುಟುಂಬದವರನ್ನು ಕಲ್ಯಾಣ ಮಂಟಪಕ್ಕೆ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.

ಇದೇ ವೇಳೆ ಮದುಮಗಳು ತನ್ನ ಕುಟುಂಬದ ಜೊತೆ ತೆರಳುತ್ತಿದ್ದ ವೇಳೆ ಆಕೆಯನ್ನು ತಡೆದ ಪೊಲೀಸರು ಕಾರಿನಲ್ಲಿ ತೆರಳಲು ಬಿಟ್ಟಿಲ್ಲ. ಕೆಲ ಸಮಯ ರಸ್ತೆಯಲ್ಲಿಯೇ ಪರದಾಡಿದ ಮದುಮಗಳು ಹಾಗೂ ಆಕೆ ಕುಟುಂಬದವರು ಪೊಲೀಸರನ್ನು ಒಪ್ಪಿಸಿ ಬೈಕ್ ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...