alex Certify ಬಿಜೆಪಿ ಸೇರಿದ್ದಕ್ಕೆ ಜನ ನನ್ನನ್ನು ಸೋಲಿಸಿದರು; ಉಪ ಚುನಾವಣೆ ನೆನಪಿಸಿಕೊಂಡು ಅಸಮಾಧಾನ ವ್ಯಕ್ತಪಡಿಸಿದ ಸಚಿವ MTB | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸೇರಿದ್ದಕ್ಕೆ ಜನ ನನ್ನನ್ನು ಸೋಲಿಸಿದರು; ಉಪ ಚುನಾವಣೆ ನೆನಪಿಸಿಕೊಂಡು ಅಸಮಾಧಾನ ವ್ಯಕ್ತಪಡಿಸಿದ ಸಚಿವ MTB

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಬಿಟ್ಟು ಬಿಜೆಪಿ ಬಂದಿದ್ದಕ್ಕೆ ಉಪಚುನಾವಣೆ ವೇಳೆ ಜನ ನನ್ನನ್ನು ಸೋಲಿಸಿ ಬಿಟ್ಟರು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಯಾವ ಶಾಸಕರು, ಯಾವ ಸಚಿವರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಜನರೇ ನೆನಪಿಟ್ಟುಕೊಳ್ಳಬೇಕು. ಚುನಾವಣೆಗೆ ನಾಲ್ಕೈದು ದಿನ ಇರುವಾಗ ಜನ ಮರೆತು ಬಿಡುತ್ತಾರೆ. ನಿದ್ದೆ ಮಂಪರು ಬಂದ ಹಾಗೆ ಜನ ತೂಕಡಿಸುತ್ತಾರೆ. ಮೊನ್ನೆ ನಡೆದ ಬೈ ಎಲೆಕ್ಷನ್ ನಲ್ಲಿ ಜನ ನನ್ನನ್ನೇ ಸೋಲಿಸಿಬಿಟ್ಟರು ಎಂದು ಹೇಳಿದ್ದಾರೆ.

ಇಲ್ಲಿ ನನ್ನದೊಂದು ತಪ್ಪಿದೆ ಸುಧಾಕರ್ ಜೊತೆ ನಾನೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ನನ್ನನ್ನು ಸೋಲಿಸಿದರು. ಆದರೆ ಸುಧಾಕರ್ ನನ್ನು ಗೆಲ್ಲಿಸಿದ್ದೀರ ಅದು ನನಗೆ ನೋವು ತಂದಿದೆ. ಸೋಲಿನಿಂದಾಗಿ ನನಗೇನೂ ಕಷ್ಟವಾಗಿಲ್ಲ. ಆದರೆ ಹೊಸಕೋಟೆ ಅಭಿವೃದ್ಧಿಗೆ ಹಿನ್ನಡೆಯಾಯಿತು. ಅಲ್ಲಿನ ಜನರ ಸೇವೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...