alex Certify ಈ ರಾಶಿಯವರಿಗೆ ಇದೆ ಇಂದು ಉತ್ತಮ ಆರ್ಥಿಕ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇದೆ ಇಂದು ಉತ್ತಮ ಆರ್ಥಿಕ ಸ್ಥಿತಿ

ಮೇಷ ರಾಶಿ

ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕೈಬಿಗಿ ಹಿಡಿಯುವುದು ಒಳ್ಳೆಯದು.

ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ, ಇಂದಿನ ಕಾರ್ಯಗಳು ದೈವ ಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು.

ವೃಷಭ ರಾಶಿ

ನೀವು ಬಸವಳಿಯುವ ವ್ಯಕ್ತಿಯಲ್ಲ. ನಿಮ್ಮ ಗುಣವೇ ಅಂತಹದು. ಈ ಗುಣದಿಂದಲೇ ನೀವು ಮಹತ್ತರವಾದ ಕಾರ್ಯ ಮಾಡಿ ಮುಗಿಸುವಿರಿ. ಇದರಿಂದ ವಿರೋಧಿಗಳು ಕೂಡಾ ನಿಮ್ಮ ಬಗ್ಗೆ ಹೆಮ್ಮೆ ಪಡುವರು. ಸ್ನೇಹಿತರೊಡನೆ ನಗುವಿನ ಅಲೆಯು ನವಿರಾಗಿರಲಿ.

ಗೆಳೆಯರೊಬ್ಬರಿಂದ ಚೈತನ್ಯಕಾರಿ ಬೆಂಬಲ ದೊರೆಯುವುದು. ಆದಾಗ್ಯೂ ಯಾವುದೋ ಕೌಟುಂಬಿಕ ವಿಷಯವು ನಿಮ್ಮ ತಲೆನೋವಿಗೆ ಕಾರಣವಾಗುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ವಿವಿಧ ಒತ್ತಡಗಳಿಂದ ಜರ್ಜರಿತರಾಗಿರುತ್ತೀರಿ. ಆದರೆ ಅನಿರೀಕ್ಷಿತ ಬೆಳವಣಿಗೆಯು ನಿಮ್ಮ ಒತ್ತಡಗಳನ್ನು ಕಡಿಮೆ ಮಾಡುವುದು. ಮಾತು ಆಡುವಾಗ ಎರಡು ಬಾರಿ ಯೋಚಿಸಿ ಮಾತನಾಡಿ. ಮಾತು ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವುದು.

ಮಿಥುನ ರಾಶಿ

ಹೊಸಬರೊಬ್ಬರು ನಿಮ್ಮನ್ನು ಸಂಪರ್ಕಿಸಿ, ನಿಮಗೆ ಬೇಕಾದ ಉಪಯುಕ್ತ ಸಲಹೆಗಳನ್ನು ಕೊಡುವರು. ಅದರಿಂದ ನಿಮ್ಮ ಕಾರ್ಯಗಳು ಸುಲಲಿತವಾಗುವವು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು.

ಕೆಲಸದ ಒತ್ತಡಗಳು ಹೆಚ್ಚು ಇದ್ದು ಯಾವ ಕೆಲಸವನ್ನು ಮೊದಲು ಮಾಡಬೇಕೆಂದು ಚಿಂತೆ ಉಂಟಾಗುವುದು. ಸಂಜೆಯ ವೇಳೆಗೆ ಮಹತ್ತರ ಸೂಚನೆಯನ್ನು ಕೇಳುವಿರಿ. ಆರ್ಥಿಕ ಸ್ಥಿತಿ ಉತ್ತಮ.

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ, ಅಂತೆಯೇ ಇಂದು ನೀವು ಆಶಾವಾದಿಗಳಾಗಿದ್ದೀರಿ. ಇದರಿಂದ ಬಹುನಿರೀಕ್ಷಿತ ಫಲಿತಾಂಶವನ್ನು ಕಾಣುವಿರಿ. ಹಣಕಾಸಿನ ಬಗ್ಗೆ ಜಾಗೃತರಾಗಿರಿ.

ಕರ್ಕಾಟಕ ರಾಶಿ

ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಬಂಧು ಮಿತ್ರರೊಡನೆ ಸಮಾಗಮ. ದುಃಖ ನಾಶ. ಹಮ್ಮಿಕೊಂಡಿರುವ ಕಾರ್ಯದಲ್ಲಿ ಯಶಸ್ಸು. ರಾಜಸನ್ಮಾನ, ಕೌಟುಂಬಿಕ ಜೀವನದ ನೆಮ್ಮದಿಯ ಸಮಯ, ಸಾಮಾಜಿಕ ಜನಪ್ರಿಯತೆ ಹೆಚ್ಚಾಗುವುದು.

ಸ್ವಧರ್ಮಾಚರಣೆಯಿಂದ ಚಿತ್ತ ಶುದ್ಧಿ. ಕ್ರಯವಿಕ್ರಯದಲ್ಲಿ ಅಧಿಕ ಲಾಭಾಂಶ ಕಂಡು ಬರುವುದು. ಆರೋಗ್ಯ ಉತ್ತಮವಾಗಿರುವುದು. ಗುರು-ಹಿರಿಯರಲ್ಲಿ ತೋರುವ ಭಕ್ತಿಯಿಂದ ಒಳಿತಾಗುವುದು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ.

ಸಿಂಹ ರಾಶಿ

ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಗುರುವಿನ ಬಲ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ.

ಸ್ತ್ರೀ ಸಮೂಹದ ಜೊತೆಯಲ್ಲಿದ್ದಾಗ ಮಾತಿಗೆ ಕಡಿವಾಣ ಹಾಕಿರಿ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ತೋರಿಬರುವುದು. ಮನೋಕಾಮನೆ ಪೂರ್ಣಗೊಳ್ಳುವುದು.

ಸಾಮಾಜಿಕ ಕ್ಷೇತ್ರಗಳಿಂದ ಕೀರ್ತಿ, ಧನ ಲಾಭ. ಮಾತು ಕೊಟ್ಟ ಪ್ರಕಾರ ಕಾರ್ಯಸಿದ್ಧಿಯಾಗುವುದು. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು.

ಕನ್ಯಾ ರಾಶಿ

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಇತರರಿಗೆ ಹೆಚ್ಚಿನ ಆಶ್ವಾಸನೆ ನೀಡದಿರಿ. ಉದ್ಯೋಗಸ್ಥರಿಗೆ ಉತ್ತಮ ಅವಕಾಶ ದೊರೆಯುವುದು. ಬ್ಯಾಂಕಿಂಗ್ ವ್ಯವಹಾರಗಳು ಸುಲಲಿತವಾಗುವುದು. ನೂತನ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಗುರುವಿನ ಅನುಗ್ರಹದಿಂದ ಓದುವ ಮಕ್ಕಳಿಗೆ ಉತ್ತಮ ಫ‌ಲಿತಾಂಶ ಒದಗಿ ಬರುತ್ತದೆ. ಪತ್ರಿಕೋದ್ಯಮದ ಮಂದಿಗೆ ಸೂಕ್ತ ಗೌರವಾದರಗಳಿರುತ್ತವೆ.

ಶನೈಶ್ಚರನು ಇದ್ದು ಸ್ವಲ್ಪ ಕಷ್ಟ ಒದಗುತ್ತದೆ. ಗುರುವಿನ ಅಧಿಪತಿ ಇಷ್ಟಾರ್ಥಗಳನ್ನೂ ಈಡೇರುತ್ತವೆ. ವೃತ್ತಿ ರಂಗದಲ್ಲಿ ಯಾರಲ್ಲೂ ನಿಷ್ಠುರ ಕಟ್ಟಿಕೊಳ್ಳದಿರಿ. ಸತ್ಯ ಮರೆಯದಿರಿ.

ತುಲಾ ರಾಶಿ

ಎಲ್ಲಾ ಇದ್ದರೂ ಇಲ್ಲಾ ಎಂದು ಅನ್ನಿಸುತ್ತಲೇ ಇರುವ ವಾತಾವರಣವಿರುತ್ತದೆ. ಶುಕ್ರಗ್ರಹದ ಪ್ರಭಾವದಿಂದ ವ್ಯಾಪಾರಸ್ಥರಿಗೆ ಎಳ್ಳೆಣ್ಣೆ, ಸಂಬಾರ ಪದಾರ್ಥಗಳ ವಹಿವಾಟು,

ಸಿಹಿತಿಂಡಿಗಳ ವ್ಯಾಪಾರ, ಬೇಕರಿ ವ್ಯವಹಾರ ಕಬ್ಬಿಣ ವ್ಯಾಪಾರ ಇತ್ಯಾದಿಗಳಿಂದ ಮನಸ್ಸಿಗೆ ತೋಚಿದ್ದನ್ನು ನಡೆಸದೇ ಗುರು ಹಿರಿಯರು ಹೇಳುವ ಹಾಗೇ ನಡೆಯುವುದು. ಇಲ್ಲವಾದರೆ ಹಿರಿಯರಿಗೆ ಹಳೆಯ ಕಾಲದ ನಡುವಣ ಸಂಘರ್ಷದಿಂದ ನಿಮ್ಮ ಮನಸ್ಸು ಘಾಸಿಗೊಳ್ಳಲಿದೆ. ಮಕ್ಕಳಿಂದ ಹಿತವಿದೆ.

ವೃಶ್ಚಿಕ ರಾಶಿ

ಸಮಾಧಾನವಾದ ಅವಗಾಹನೆ, ಕಾರ್ಯತಂತ್ರಗಳ ಗಡಿಬಿಡಿಯಿಂದ ಹೊಸತಾದ ಧನಾತ್ಮಕ ಚಿಂತನೆ ಈ ದಿನ ನಿಮಗೆ ಉತ್ತಮವಾಗಿಸುತ್ತದೆ.

ಇಲ್ಲಿಯವರೆಗೆ ತಾಕಲಾಟಗಳಿಗೆ ರಾಶಿಸ್ಥಿತ ಶನಿ ಕಾರಣವಾಗುತ್ತದೆ. ನಿಮ್ಮ ರಾಶಿ ಶನಿಯ ಚಲನೆ ರಾಶಿಯ ಸ್ವ ಕ್ಷೇತ್ರದಲ್ಲಿದ್ದು ಅನೇಕ ಅಸಂಗತಗಳನ್ನು ದೂರೀಕರಿಸುತ್ತದೆ. ನಿಭಾಯಿಸುವ ಸಿದ್ಧಿಗೆ ಸಾಧಕವಾಗಲಿದೆ.

ಬಹುಮಾನ ಉದ್ಯೋಗದಲ್ಲಿ ಧನಾಗಮನ ಉಂಟಾದೀತು. ಆರ್ಥಿಕವಾಗಿ ಭಿನ್ನವಾದ ಚೈತನ್ಯ ಉಂಟಾಗಲಿದೆ. ನಿಮ್ಮ ಯೋಜನಾ ಕ್ರಮವೇ ಪರಿವರ್ತನೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಸತತ ಓದು. ಅಭ್ಯಾಸಬಲ ಸಾಧ್ಯವಾದಲ್ಲಿ ಗೆಲುವಿದೆ. ನೀವು ಸರಕಾರಿ ನೌಕರರಾಗಿದ್ದಲ್ಲಿ ಕೆಲವು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಧನುಸ್ಸು ರಾಶಿ

ಗುರುಬಲ ಇಲ್ಲ ಆರ್ಥಿಕವಾಗಿ ಹಲವು ದಾರಿಗಳನ್ನು ತೆರೆದು ತೋರಿದರೂ ಖರ್ಚು ವೆಚ್ಚಗಳು ಎಂಬ ಒದ್ದಾಟ ಇದ್ದೇ ಇರುತ್ತದೆ. ಆಗಾಗ ಭ್ರಮೆಯ ನಿರ್ಮಾಣ ಗೋಚರಕ್ಕೆ ಬರುತ್ತದೆ. ತಾಳಿದವನು ಬಾಳಿಯಾನು. ಶ್ರೀ ಕೃಪೆ ಬೇಕು. ಸದ್ಯದ ಸ್ಥಿತಿಯಲ್ಲಿ ಎಲ್ಲಾ ಒತ್ತಡಗಳನ್ನು ಸಾವಧಾನವಾಗಿ ನಿಭಾಯಿಸಬೇಕಾಗುತ್ತದೆ. ವಿರೋಧಿಗಳು ನೀಡುವ ಕಿರುಕುಳವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ.

ಶೇರುಗಳಲ್ಲಿ ಒಮ್ಮೆಲೇ ತೊಡಗಿಸುವುದು ಉತ್ತಮವಲ್ಲ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನಡುವೆ ಹೊಂದಾಣಿಕೆ ಚೆನ್ನಾಗಿ ವೃದ್ಧಿಸಲಿದೆ. ವಾಹನ ಗ್ಯಾಸ್‌, ವಿದ್ಯುತ್‌ ಬಗ್ಗೆ ಎಚ್ಚರವಿರಲಿ. ಚರ್ಮದ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು. ತೀರ್ಥಕ್ಷೇತ್ರಗಳ ಒಲವಿದ್ದವರಿಗೆ ತೀರ್ಥಕ್ಷೇತ್ರಕ್ಕೂ ಹೋಗಿ ಬರುವ ಅವಕಾಶಗಳಿರುತ್ತವೆ.

ಮಕರ ರಾಶಿ

ವೃತ್ತಿರಂಗದಲ್ಲಿ ನಿಮ್ಮ ಅದೃಷ್ಟ ನಿಮ್ಮನ್ನು ಮೇಲೆತ್ತಲಿದೆ. ನೆರೆಹೊರೆಯ ಜನಬಂಧು ಬಳಗದವರ ನಡುವೆ ಮಿಂಚಲಿದ್ದೀರಿ. ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಆರ್ಥಿಕ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಗಮನವಿರಲಿ.

ಜೀವನದ ಪಥ ಸರಾಗವಾಗಿ ಆಗುತ್ತಿರುವುದು. ನಿಮಗೆ ಸಂತಸ ತರುವುದು. ಇದರ ಹಿಂದೆ ಗುರು ಹಿರಿಯರ ಆಶೀರ್ವಾದದಿಂದ ಮಾತಾಪಿತರ ತ್ಯಾಗವಿದೆ ಎಂಬುದನ್ನು ಮರೆಯದಿರಿ.

ಯಾವುದನ್ನು ದಿಢೀರನೆ ತೀರ್ಮಾನ ಮಾಡುವುದು ಸೂಕ್ತವಲ್ಲ. ಸುಖಸ್ಥಾನದ ಶುಭಗ್ರಹ ಸಂಚಾರದಿಂದಾಗಿ ಮನೆ, ಮಡದಿ, ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು.

ಕುಂಭ ರಾಶಿ

ಹಿರಿಯರಿಂದ ವಾಹನ ಸುಖವೂ ದೊರೆತು ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವವು.

ನಿಮ್ಮ ಹೆಸರನ್ನು ಹೇಳಿ ಬೇರೆಯವರು ತಮ್ಮ ಕೆಲಸವನ್ನು ಸಾಧಿಸಿಕೊಳ್ಳುವರು. ಅಂತಹವರ ಬಗ್ಗೆ ಎಚ್ಚರದಿಂದ ಇರಬೇಕು. ಉತ್ತಮ ಆರೋಗ್ಯ ರಕ್ಷಣೆಗಾಗಿ ಸೂರ್ಯನಾರಾಯಣನನ್ನು ಪ್ರಾರ್ಥಿಸಿರಿ. ಮನಬಂದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸುಲಭ. ಆದರೆ ಅವುಗಳನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗುವಿರಿ. ಈ ಬಗ್ಗೆ ಅನುಭಾವಿಗಳ ಸಹಾಯ ಪಡೆಯುವುದು. ಹಣಕಾಸಿನ ವಿಷಯದಲ್ಲಿ ಕೊರತೆಯಿಲ್ಲ. ಮೈಮುರಿದು ದುಡಿಯಿರಿ.

ಮೀನ ರಾಶಿ

ನಿಮ್ಮ ಪ್ರಯತ್ನಬಲ ನಿಮ್ಮನ್ನು ಕೈಹಿಡಿದು ಮುನ್ನಡೆಸಲಿದೆ. ನಿಮ್ಮ ಅಹಂಗೆ ಪೆಟ್ಟು ಬಿದ್ದಾಗ ಕೆರಳದಿರಿ. ಮನದೊಳಗಿನ ಕಿಚ್ಚು ಬಿಟ್ಟು ಸ್ನೇಹಹಸ್ತ ಚಾಚಿರಿ. ಅನಿರೀಕ್ಷಿತ ಬೆಂಬಲ ದೊರಕಲಿದೆ. ಆರ್ಥಿಕ ಸ್ಥಿತಿಯು ವ್ಯವಹಾರಸ್ಥರಿಗೆ ಹೆಚ್ಚಿನ ಆತಂಕ ತರದು. ನಿಮ್ಮ ಚಿಂತನೆ ಹಾಗೂ ದೈವದ ವಿಧಿಯ ಯೋಚನೆ ಬೇರೆಯದೇ ಆಗಿರುತ್ತದೆ.

ಕ್ರೀಡಾಪಟುಗಳಿಗೆ ಅವಮಾನದ ಪ್ರಸಂಗ ತಂದೀತು. ಅವರ ಯೋಚನೆ, ವರ್ತನೆ ಅವರಿಗೇ ನಾಚಿಕೆಯಾಗುವಂತೆ ತೋರೀತು. ವೃತ್ತಿಜೀವನದಲ್ಲಿ ಜಾಗರೂಕರಾಗಿರಿ. ಅಡಚಣೆಯೊಂದಿಗೆ ನಿಮ್ಮ ಹೋರಾಟದ ಸಾಮರ್ಥ್ಯ ಹೆಚ್ಚಾಗುತ್ತದೆ. ಅನಗತ್ಯ ಕುತೂಹಲ ಜಗಳಕ್ಕೆ ಕಾರಣವಾಗುತ್ತದೆ. ಸಂಗಾತಿಯೊಂದಿಗೆ ಸುಖಕರ ಜೀವನ ಹೊಂದುವಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...