alex Certify ಬಜೆಟ್ ಮಂಡನೆ ವೇಳೆ‌ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಉಟ್ಟಿದ್ದ ಧಾರವಾಡದ ಸೀರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜೆಟ್ ಮಂಡನೆ ವೇಳೆ‌ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಉಟ್ಟಿದ್ದ ಧಾರವಾಡದ ಸೀರೆ

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅಂತ ಸಂಸ್ಕೃತಿ ದೇಶದ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಅಂದರೆ ಇನ್ನೆಷ್ಟು ಹೆಮ್ಮೆಯಾಗಬೇಡ. ಅಂತಹ ಸಾಲಿನಲ್ಲಿ ನಮ್ಮ ಕಸೂತಿ ಕಲೆ ಕೂಡ ಒಂದು. ಇಂದು ನಡೆದ ಕೇಂದ್ರ ಬಜೆಟ್ ನ ವೇಳೆ ನಿರ್ಮಲಾ ಸೀತಾರಾಮನ್ ಅವರ ಸೀರೆಯೊಂದು ಚರ್ಚೆಗೆ ಕಾರಣವಾಗಿದೆ. ಅಷ್ಟೆ ಅಲ್ಲ ಕನ್ನಡಿಗರೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ತಾ ಇದ್ದಾರೆ.

ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ವೇಳೆ ಅವರುಟ್ಟಿದ್ದ ಸೀರೆ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಸೀರೆ. ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ಇದನ್ನು ತಯಾರು ಮಾಡಿದ್ದಾರೆ. ಈ ಸೀರೆಯುಟ್ಟು ಅವರು ಬಜೆಟ್ ಮಂಡನೆ ಮಾಡಿರೋದು ವಿಶೇಷ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ಈ ನವಲಗುಂದ ಕಸೂತಿ ಕಲೆ ಬಗ್ಗೆ ಹೇಳಿದ್ದರಂತೆ. ಜೊತೆಗೆ ಒಂದಿಷ್ಟು ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಸಾಮಾನ್ಯವಾಗಿ ಯಾವಾಗದರೊಮ್ಮೆ ಈ ಸೀರೆ ಉಟ್ಟಿದ್ದರೆ ಅಷ್ಟು ವಿಶೇಷ ಆಗ್ತಾ ಇರಲಿಲ್ಲ. ಬಜೆಟ್ ಸಮಯದಲ್ಲಿ ಈ ಸೀರೆ ಎಲ್ಲರ ಗಮನ ಸೆಳೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...