alex Certify ಪ್ರೀತಿಸಿ ಜೈಲು ಸೇರಿದ್ದ ಯುವಕ, ಪ್ರಿಯತಮೆ ಭೇಟಿ ಬೆನ್ನಲ್ಲೇ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಜೈಲು ಸೇರಿದ್ದ ಯುವಕ, ಪ್ರಿಯತಮೆ ಭೇಟಿ ಬೆನ್ನಲ್ಲೇ ದುಡುಕಿನ ನಿರ್ಧಾರ

ಗದಗ: ಜಿಲ್ಲಾ ಕಾರಾಗೃಹದಲ್ಲಿ ಕೈದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 19 ವರ್ಷದ ರಾಜು ಲಮಾಣಿ ನೇಣಿಗೆ ಶರಣಾದ ಯುವಕ ಎಂದು ಹೇಳಲಾಗಿದೆ.

ಗದಗ ತಾಲೂಕಿನ ಅಡವಿಸೋಮಾಪುರ ನಿವಾಸಿಯಾಗಿರುವ ರಾಜು ಅಪ್ರಾಪ್ತೆಯನ್ನು ಪ್ರೀತಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ. 20 ದಿನಗಳಿಂದ ಅವರು ಜೈಲಿನಲ್ಲಿದ್ದರು. ಜೈಲಿಗೆ ಅಪ್ರಾಪ್ತೆ ಮತ್ತು ಆಕೆಯ ಪೋಷಕರು ಭೇಟಿ ನೀಡಿದ್ದರು. ಅವರು ಬಂದು ಹೋದ ನಂತರ ಅಪ್ರಾಪ್ತ ಭೇಟಿ ಬೆನ್ನಲ್ಲೇ ಕೈದಿ ರಾಜು ನೇಣಿಗೆ ಶರಣಾಗಿದ್ದಾರೆ.

ಜೈಲು ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ರಾಜು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಿಬ್ಬಂದಿಯ ವಿರುದ್ಧ ಮೃತನ ಪೋಷಕರು ಆರೋಪ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...