alex Certify ಪ್ರಿಯಕರನ ಜೊತೆ ಓಡಿ ಹೋದ ಪತ್ನಿ..! ಅಮಾಯಕ ಪತಿ ವಿರುದ್ಧ ದಾಖಲಾಯ್ತು ಕೊಲೆ ಕೇಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಜೊತೆ ಓಡಿ ಹೋದ ಪತ್ನಿ..! ಅಮಾಯಕ ಪತಿ ವಿರುದ್ಧ ದಾಖಲಾಯ್ತು ಕೊಲೆ ಕೇಸ್….!

ಪೊಲೀಸ್​ ಇಲಾಖೆಯ ದಾಖಲೆಗಳಲ್ಲಿ ಮೃತಪಟ್ಟಿದ್ದಾಳೆ ಎಂದು ಘೋಷಣೆಯಾದ ಬಿಹಾರದ ಮೋತಿಹಾರಿ ಜಿಲ್ಲೆಯ ಮಹಿಳೆಯು ಜಲಂಧರ್​ನಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಆಘಾತಕಾರಿ ವಿಚಾರ ಏನೆಂದರೆ ಈಕೆಯ ಪತಿಯು ಪತ್ನಿಯನ್ನು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಶಾಂತಿ ದೇವಿ ಎಂದು ಗುರುತಿಸಲಾದ ಮಹಿಳೆಯು 2016ರ ಜೂನ್​ 14ರಂದು ಲಕ್ಷ್ಮೀಪುರದ ನಿವಾಸಿ ದಿನೇಶ್​ ರಾಮ್​​ರನ್ನು ವಿವಾಹವಾದರು. ಮದುವೆಯಾಗಿ ವರ್ಷಗಳ ಬಳಿಕ ಶಾಂತಿ ಏಪ್ರಿಲ್​ 19ರಂದು ಪತಿಯ ಮನೆಯಿಂದ ಓಡಿ ಹೋಗಿ ತನ್ನ ಪ್ರಿಯತಮನ ಜೊತೆಯಲ್ಲಿ ಪಂಜಾಬ್​​ನಲ್ಲಿ ವಾಸಿಸುತ್ತಿದ್ದಾಳೆ.

ಮಹಿಳೆಯು ನಾಪತ್ತೆಯಾದ ಬಳಿಕ ಆಕೆಯ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ಪತಿಯ ವಿರುದ್ಧ ವರದಕ್ಷಿಣೆ ಆರೋಪವನ್ನು ಹೊರಿಸಿದ್ದಾರೆ.

ಅಲ್ಲದೇ ಆಕೆಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು. ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪತಿ ದಿನೇಶ್​ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...