alex Certify ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗದಿಂದ ಸಂಚರಿಸುವ ಜನಶತಾಬ್ದಿ ರೈಲು 4 ದಿನಗಳ ಕಾಲ ಭಾಗಶಃ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗದಿಂದ ಸಂಚರಿಸುವ ಜನಶತಾಬ್ದಿ ರೈಲು 4 ದಿನಗಳ ಕಾಲ ಭಾಗಶಃ ರದ್ದು

ದೇವನೂರು ಮತ್ತು ಬಾಣಾವರ ರೈಲ್ವೇ ಯಾರ್ಡ್ ಗಳಲ್ಲಿ ಥಿಕ್ ವೆಬ್ ಸ್ವಿಚ್ ಅಳವಡಿಸುವ ಕಾರ್ಯ ನಡೆಯುತ್ತಿರುವ ಕಾರಣ ಶಿವಮೊಗ್ಗ – ಕೆ.ಎಸ್.ಆರ್. ಬೆಂಗಳೂರು ಜನಶತಾಬ್ದಿ ರೈಲು ಸೇರಿದಂತೆ ಕೆಲ ರೈಲುಗಳ ರದ್ದು ಅಥವಾ ಭಾಗಶಃ ರದ್ದು ಮಾಡಲಾಗಿದೆ.

ಶಿವಮೊಗ್ಗ – ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ರೈಲ ಸಂಚಾರವನ್ನು ಮೇ 11, 18, 23 ಹಾಗೂ 28ರಂದು ಶಿವಮೊಗ್ಗ ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ. ಹೀಗಾಗಿ ಈ ರೈಲು ನಿಗದಿತ ವೇಳಾಪಟ್ಟಿಯಂತೆ ಶಿವಮೊಗ್ಗದ ಬದಲಾಗಿ ಅರಸೀಕೆರೆಯಿಂದ ಸಂಚಾರ ಆರಂಭಿಸಲಿದೆ.

ಇನ್ನು ಎಸ್.ಎಸ್.ಎಸ್. ಹುಬ್ಬಳ್ಳಿ – ಅರಸೀಕೆರೆ ವಿಶೇಷ ಪ್ಯಾಸೆಂಜರ್ ರೈಲು ಕೂಡ ಭಾಗಶಃ ರದ್ದಾಗಿದ್ದು, ಮೇ 10, 17 ಹಾಗೂ 27 ರಂದು ಬೀರೂರಿನಲ್ಲಿ ಪ್ರಯಾಣ ಅಂತ್ಯಗೊಳ್ಳಲಿದೆ. ಮತ್ತೆ ಬೀರೂರಿನಿಂದಲೇ ಈ ರೈಲು ವಾಪಾಸ್ ಹುಬ್ಬಳ್ಳಿಗೆ ಹೋಗಲಿದೆ.

ಜೊತೆಗೆ ತುಮಕೂರು – ಶಿವಮೊಗ್ಗ ನಡುವೆ ಸಂಚರಿಸುವ ವಿಶೇಷ ಪ್ಯಾಸೆಂಜರ್ ರೈಲನ್ನು ಮೇ 17, 22 ಹಾಗೂ 27ರಂದು ರದ್ದುಪಡಿಸಲಾಗಿದೆ. ಹಾಗೆ ಶಿವಮೊಗ್ಗದಿಂದ ಹೊರಡುವ ರೈಲು ಸಂಚಾರವನ್ನು ಮೇ 11, 18, 23 ಹಾಗೂ 28ರಂದು ರದ್ದುಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...