alex Certify ಪೌರ ಕಾರ್ಮಿಕ ಮಹಿಳೆಯ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಕೇಂದ್ರ ಸಚಿವ ಸಿಂಧಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೌರ ಕಾರ್ಮಿಕ ಮಹಿಳೆಯ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಕೇಂದ್ರ ಸಚಿವ ಸಿಂಧಿಯಾ

ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಸ ಗುಡಿಸುವ ಮಹಿಳೆಯ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಗ್ವಾಲಿಯರ್​ ನಗರವು ಸ್ವಚ್ಛತೆಯ ವಿಚಾರದಲ್ಲಿ ಸತತವಾಗಿ ಹಿಂದುಳಿದಿದೆ. ಈ ವರ್ಷ ನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣ್​​ ಅಡಿಯಲ್ಲಿ ಗ್ವಾಲಿಯರ್​ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪೌರ ಕಾರ್ಮಿಕರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ.

ಗ್ವಾಲಿಯರ್​​ ಮುನ್ಸಿಪಲ್​ ಕಾರ್ಪೋರೇಷನ್​ ಆಯೋಜಿಸಿದ್ದ ಸ್ವಚ್ಛತಾ ಸಮ್ಮಾನ್​ ಸಮಾರಂಭದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆಯಲ್ಲಿ ವೇದಿಕೆಯಿಂದ ಕೆಳಗಿಳಿದ ಸಿಂಧಿಯಾ ಬಬಿತಾ ಎಂಬ ಪೌರ ಕಾರ್ಮಿಕೆಯನ್ನು ವೇದಿಕೆಗೆ ಕರೆ ತಂದಿದ್ದಾರೆ.

ಬಬಿತಾರಿಗೆ ಶಾಲು ನೀಡಿ ಗೌರವಿಸಿದ ಸಿಂಧಿಯಾ ಬಳಿಕ ಅವರ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

— Jyotiraditya M. Scindia (@JM_Scindia) March 26, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...