alex Certify ಪೊಲೀಸರು ಹಾಗೂ ಮಾಧ್ಯಮಗಳ ಜೊತೆ ವಾಗ್ವಾದಕ್ಕಿಳಿದ ʼದಿ ಕಾಶ್ಮೀರ್​ ಫೈಲ್ಸ್ʼ​ ನಿರ್ದೇಶಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರು ಹಾಗೂ ಮಾಧ್ಯಮಗಳ ಜೊತೆ ವಾಗ್ವಾದಕ್ಕಿಳಿದ ʼದಿ ಕಾಶ್ಮೀರ್​ ಫೈಲ್ಸ್ʼ​ ನಿರ್ದೇಶಕ

ಬಾಲಿವುಡ್​ನಲ್ಲಿ ಇತ್ತೀಚಿಗೆ ತೆರೆ ಕಂಡಿರುವ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾವು ಸಂಪೂರ್ಣ ರಾಷ್ಟ್ರದಲ್ಲಿಯೇ ಒಂದು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಎಲ್ಲೆಲ್ಲೂ ಹೌಸ್​ಫುಲ್​ ಪ್ರದರ್ಶನಗಳು, ಕಣ್ಣೀರಿನ ಕತೆಗಳು ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.

ಅದರೆ ಸಮಾಜದ ಒಂದು ವರ್ಗವು ಈ ಸಿನಿಮಾದ ಬಗ್ಗೆ ಸಂತೋಷವಾದಂತೆ ಕಾಣುತ್ತಿಲ್ಲ. ಇದನ್ನು ಪ್ರಚಾರ ಎಂದು ಕರೆದಿದ್ದಾರೆ. ವಿವೇಕ್​ ಅಗ್ನಿಹೋತ್ರಿ ಈ ಸಿನಿಮಾದ ಮೂಲಕ ದೇಶದ ಜನರ ನಡುವೆ ದ್ವೇಷವನ್ನು ಬಿತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ವಿವೇಕ್​ ಅಗ್ನಿಹೋತ್ರಿ ಮಾಧ್ಯಮಗಳು ಹಾಗೂ ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ವಿವೇಕ್​ ತಮ್ಮ ಸಿನಿಮಾ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಭಾಗ್ಯಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಹೈದರಾಬಾದ್​ನಲ್ಲಿ ದೇವಸ್ಥಾನದಿಂದ ಹೊರಬೀಳುತ್ತಿದ್ದಂತೆಯೇ ಮುಗಿಬಿದ್ದ ಪತ್ರಕರ್ತರು ಈ ಸಿನಿಮಾದ ಮೂಲಕ ನೀವು ದ್ವೇಷ ಹರಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ವಿವೇಕ್​, ಈ ಸಿನಿಮಾವು 1990ರಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನಾಧರಿಸಿ ನಿರ್ಮಿಸಲಾಗಿದೆ. ಮಾನವೀಯತೆಯನ್ನು ಉತ್ತೇಜಿಸುವುದು ನನ್ನ ಗುರಿಯಾಗಿದೆ. ನಾನು ದ್ವೇಷವನ್ನು ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಆದರೆ ನಿಮ್ಮ ಸಿನಿಮಾ ದ್ವೇಷವನ್ನು ಹುಟ್ಟು ಹಾಕುತ್ತಿದೆ ಎಂದು ಪತ್ರಕರ್ತರೊಬ್ಬರು ವಿವೇಕ್​ರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಉತ್ತರಿಸಿದ ವಿವೇಕ್​, ಭಯೋತ್ಪಾದನೆಯ ವಿರುದ್ಧದ ಚಿತ್ರವು ದ್ವೇಷವನ್ನು ಹರಡಲು ಹೇಗೆ ಸಾಧ್ಯ..? ನಾನು ಭಯೋತ್ಪಾದನೆ ಹೇಗೆ ಇಡೀ ಸಂಸ್ಕೃತಿಯನ್ನು ನಾಶ ಪಡಿಸಿದೆ ಎಂಬುದರ ಬಗ್ಗೆ ಸಿನಿಮಾ ನಿರ್ಮಿಸಿದ್ದೇನೆ. ನನ್ನ ಸ್ವಂತ ದೇಶದಲ್ಲಿ ನಿಂತು ಈ ಬಗ್ಗೆ ನಾನು ಸ್ಪಷ್ಟನೆ ನೀಡಬೇಕು ಅಂದರೆ ಇದೆಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್​ ಸಿಬ್ಬಂದಿಯೊಬ್ಬರು ವಿವೇಕ್​ ಅಗ್ನಿಹೋತ್ರಿ ಬಳಿ ಈ ಜಾಗದಿಂದ ಕದಲುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿವೇಕ್​, ನಾನೇಕೆ ಮಾಧ್ಯಮಗಳ ಜೊತೆ ಮಾತನಾಡಬಾರದು..? ನಾನು ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂಬುದಕ್ಕೆ ಒಂದು ಕಾರಣ ನೀಡಿ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ಪೊಲೀಸ್​ ಸಿಬ್ಬಂದಿ ಇದು ದೇವಸ್ಥಾನ . ಹೀಗಾಗಿ ನೀವು ಇಲ್ಲಿಂದ ತೆರಳಬೇಕು ಎಂದಿದ್ದಾರೆ. ಇದಕ್ಕೆ ವಿವೇಕ್​, ನೀವು ಮೊದಲು ಮಾಧ್ಯಮದವರನ್ನು ತಡೆಯಬೇಕೆ ಹೊರತು ನನ್ನನ್ನಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...