alex Certify ಪೂಜೆ ಸಮಯದಲ್ಲಿ ಕೈಗಳಿಗೆ ಕೆಂಪು ದಾರ ಕಟ್ಟಿಕೊಳ್ಳುವುದೇಕೆ ? ಈ ರಕ್ಷಾ ಸೂತ್ರಕ್ಕಿದೆ ಅಪಾರ ಶಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂಜೆ ಸಮಯದಲ್ಲಿ ಕೈಗಳಿಗೆ ಕೆಂಪು ದಾರ ಕಟ್ಟಿಕೊಳ್ಳುವುದೇಕೆ ? ಈ ರಕ್ಷಾ ಸೂತ್ರಕ್ಕಿದೆ ಅಪಾರ ಶಕ್ತಿ…!

ಹಿಂದೂಗಳು ಧಾರ್ಮಿಕ ಕಾರ್ಯಗಳನ್ನು, ಪೂಜೆ ಪುನಸ್ಕಾರ ಮಾಡುವ ಸಂದರ್ಭದಲ್ಲಿ ಮಣಿಕಟ್ಟಿನ ಮೇಲೆ ಕೆಂಪು ದಾರವನ್ನು ಕಟ್ಟಿಕೊಳ್ತಾರೆ. ಇದನ್ನು ಪುರುಷರ ಬಲ ಮಣಿಕಟ್ಟಿನ ಮೇಲೆ ಮತ್ತು ಮಹಿಳೆಯರ ಎಡ ಮಣಿಕಟ್ಟಿನ ಕಟ್ಟಲಾಗುತ್ತದೆ. ಇದಕ್ಕೆ ಮೌಲಿ ಎಂದು ಕರೆಯಲಾಗುತ್ತದೆ. ಇದರ ಅರ್ಥ ಎಲ್ಲಕ್ಕಿಂತ ಹೆಚ್ಚು ಎಂದು.

ಧಾರ್ಮಿಕ ಕಾರ್ಯಗಳಲ್ಲಿ ಈ ಕೆಂಪು ದಾರವನ್ನು ಧರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕೆ ಕೆಲವೊಂದು ಧಾರ್ಮಿಕ ಕಾರಣಗಳು ಮತ್ತು ಪ್ರಾಮುಖ್ಯತೆಗಳು ಕೂಡ ಇವೆ. ಧಾರ್ಮಿಕ ಕಾರ್ಯ ಅಥವಾ ಪೂಜಾ ಕೈಂಕರ್ಯದ ಸಮಯದಲ್ಲಿ ಈ ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬ ನಂಬಿಕೆ ಇದೆ.

ಶುಭ ಕಾರ್ಯಗಳಲ್ಲಿ ಈ ಕೆಂಪು ದಾರ ಅಥವಾ ರಕ್ಷಾ ಸೂತ್ರವನ್ನು ಧರಿಸುವುದರಿಂದ ದೇವರ ಮಂಗಳಕರ ದೃಷ್ಟಿ ನಿಮ್ಮ ಮೇಲೆ ಬಿದ್ದು, ಶತ್ರುಗಳನ್ನು ಕೊನೆಗೊಳಿಸುತ್ತದೆ ಎಂದು ಭಾವಿಸಲಾಗುತ್ತದೆ. ಅಷ್ಟೇ ಅಲ್ಲ ಈ ಕೆಂಪು ದಾರ ದೀರ್ಘಾಯುಷ್ಯ ಮತ್ತು ಶತ್ರುಗಳ ವಿರುದ್ಧ ರಕ್ಷಣೆಯನ್ನು ಸಂಕೇತಿಸುತ್ತದೆ. ಹಾಗಾಗಿ ಇದನ್ನು ‘ರಕ್ಷಾ ದಾರ’ ಎಂದೂ ಕರೆಯುತ್ತಾರೆ. ವಾಮನನು ಪ್ರಗತಿಪರ ರಾಜ ಬಲಿಯ ಮಣಿಕಟ್ಟಿಗೆ ಈ ದಾರವನ್ನು ಕಟ್ಟಿ ಅಮರತ್ವವನ್ನು ಕರುಣಿಸಿದ್ದ ಎಂಬ ಧಾರ್ಮಿಕ ಹಿನ್ನೆಲೆಯೂ ಇದಕ್ಕಿದೆ.

ದಾರವನ್ನು ರಕ್ಷಾ ಅಥವಾ ರಾಖಿ ಎಂದೂ ಕರೆಯಬಹುದು. ಸಹೋದರಿಯು ತನ್ನ ಸಹೋದರನಿಗೆ ಇದನ್ನು ಕಟ್ಟುತ್ತಾಳೆ. ದಾರದಲ್ಲಿರುವ ಗಂಟುಗಳು ತಂಗಿಯ ಪ್ರೀತಿಯನ್ನು ಅವಳು ಗಂಟು ಕಟ್ಟಿದಾಗ ಹಿಡಿದಿಟ್ಟುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಸಹೋದರನು ತನ್ನ ಸಹೋದರಿಯ ಪ್ರೀತಿಯ ಸಂಕೇತವಾಗಿ ರಾಖಿಯನ್ನು ಧರಿಸುತ್ತಾನೆ ಮತ್ತು ಅವಳ ರಕ್ಷಣೆಗಾಗಿ ಹಾರೈಸುತ್ತಾನೆ. ಕಚ್ಚಾ ದಾರದಿಂದ ಮಾಡಿದ ಈ ರಕ್ಷಾ ಸೂತ್ರವು ಕೆಂಪು ಬಣ್ಣವನ್ನು ಹೊರತುಪಡಿಸಿ ಹಳದಿ ಅಥವಾ ಹಸಿರು ಬಣ್ಣದಲ್ಲಿ ಸಹ ಇರುತ್ತದೆ. ಆದರೆ ಇದನ್ನು ಕೆಂಪು ಬಣ್ಣದಲ್ಲಿ ಧರಿಸುವುದು ಇತರ ಬಣ್ಣಗಳಿಗಿಂತ ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಕೆಂಪು, ಬೆಂಕಿ ಮತ್ತು ರಕ್ತದ ಬಣ್ಣವಾಗಿದೆ, ಆದ್ದರಿಂದ ಇದು ಶಕ್ತಿಗೆ ಸಂಬಂಧಿಸಿದ್ದು. ಹಿಂದೂ ಸಂಪ್ರದಾಯಗಳ ಪ್ರಕಾರ, ಈ ಮಂಗಳಕರ ದಾರವನ್ನು ಕಟ್ಟದೆ ಯಾವುದೇ ಧಾರ್ಮಿಕ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಇದನ್ನು ಕಟ್ಟುವುದರಿಂದ ತ್ರಿದೇವ, ಬ್ರಹ್ಮ, ವಿಷ್ಣು ಮತ್ತು ಮಹೇಶ ಮತ್ತು ತ್ರಿದೇವಿಯರ ಸರಸ್ವತಿ, ಲಕ್ಷ್ಮಿ ಮತ್ತು ದುರ್ಗೆಯರ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ. ಬ್ರಹ್ಮನ ಆಶೀರ್ವಾದದಿಂದ ನೀವು ಖ್ಯಾತಿಯನ್ನು ಪಡೆಯುತ್ತೀರಿ, ಭಗವಾನ್ ವಿಷ್ಣುವಿನ ಆಶೀರ್ವಾದದಿಂದ ನೀವು ದುಷ್ಟರಿಂದ ರಕ್ಷಿಸುವ ಶಕ್ತಿಯನ್ನು ಪಡೆಯುತ್ತೀರಿ ಮತ್ತು ಭಗವಾನ್ ಶಿವನ ಆಶೀರ್ವಾದದಿಂದ ನಿಮ್ಮಲ್ಲಿರುವ ಕೆಟ್ಟ ಮತ್ತು ನಕಾರಾತ್ಮಕ ಗುಣಗಳನ್ನು ನಾಶಮಾಡುವ ಶಕ್ತಿಯನ್ನು ಪಡೆಯುತ್ತೀರಿ.

ತಾಯಿ ಸರಸ್ವತಿಯ ಆಶೀರ್ವಾದದಿಂದ ನೀವು ಜ್ಞಾನವನ್ನು ಪಡೆಯುತ್ತೀರಿ, ತಾಯಿ ಲಕ್ಷ್ಮಿಯ ಆಶೀರ್ವಾದದಿಂದ ನೀವು ಸಂಪತ್ತನ್ನು ಪಡೆಯುತ್ತೀರಿ ಮತ್ತು ತಾಯಿ ದುರ್ಗೆಯಿಂದ ನೀವು ಶಕ್ತಿಯನ್ನು ಪಡೆಯುತ್ತೀರಿ. ಈ ರಕ್ಷಾ ದಾರವನ್ನು ಧರಿಸುವುದರಿಂದ ಸಕ್ಕರೆ ಕಾಯಿಲೆ ಹೃದಯದ ಸಮಸ್ಯೆ, ರಕ್ತದೊತ್ತಡ ಸಮಸ್ಯೆ, ಮತ್ತು ಪಾರ್ಶ್ವವಾಯುಗಳಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...