alex Certify ‘ಪಿಂಚಣಿ’ ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ; ಕರೆ ಮಾಡಿದರೆ ಸಾಕು ಮನೆಬಾಗಿಲಿಗೆ ಬರಲಿದೆ ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಿಂಚಣಿ’ ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ; ಕರೆ ಮಾಡಿದರೆ ಸಾಕು ಮನೆಬಾಗಿಲಿಗೆ ಬರಲಿದೆ ಪತ್ರ

‘ಪಿಂಚಣಿ’ ಪಡೆಯಬೇಕೆಂದರೆ ಈವರೆಗೆ ಅದೊಂದು ಹರಸಾಹಸದ ಕಾರ್ಯವಾಗಿತ್ತು. ವಯೋವೃದ್ಧರು, ವಿಧವೆಯರು ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಿಂಚಣಿ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.

ಜನರಿಗೆ ಮನೆಬಾಗಿಲಲ್ಲಿ ಪಿಂಚಣಿ ನೀಡಲು ‘ಫೋನ್ ಮೂಲಕ ಪೆನ್ಷನ್’ ಎಂಬ ಯೋಜನೆಯನ್ನು ಆರಂಭಿಸಿದ್ದು, ಪಿಂಚಣಿ ಪಡೆಯಲು ಅರ್ಹರಾದವರು 4 ಅಂಕಿಯ ಸಹಾಯವಾಣಿಗೆ ಕರೆ ಮಾಡಿ ಅವರ ಹೆಸರು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ತಿಳಿಸಬೇಕಾಗುತ್ತದೆ.

ಇದಾದ ಹತ್ತು ನಿಮಿಷದಲ್ಲಿ ಕರೆ ಮಾಡಿದವರ ಸಂಪೂರ್ಣ ವಿವರ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರುಗಳಿಗೆ ತಲುಪಲಿದ್ದು, ನಂತರ ಗ್ರಾಮಲೆಕ್ಕಾಧಿಕಾರಿ ಫಲಾನುಭವಿಯ ಮನೆಗೆ ತೆರಳಿ ಅವರು ಪಿಂಚಣಿ ಪಡೆಯಲು ಅರ್ಹರಿದ್ದಾರಾ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ.

ಫಲಾನುಭವಿ ಅರ್ಹರಾಗಿದ್ದ ಪಕ್ಷದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಉಪ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಬಳಿಕ ಉಪತಹಶೀಲ್ದಾರ್ ಅವರು ಅನುಮೋದಿಸಲಿದ್ದು, ಹೀಗಾಗಿ ಕರೆ ಮಾಡಿದ 72 ತಾಸಿನಲ್ಲಿ ಫಲಾನುಭವಿಗಳಿಗೆ ಪಿಂಚಣಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...