alex Certify ಪಡಿತರ ಚೀಟಿ ಹಿಂಭಾಗ ಏಸುಕ್ರಿಸ್ತನ ಫೋಟೋ…! ರಾಮನಗರದಲ್ಲಿ ಹೊಸ ವಿವಾದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿ ಹಿಂಭಾಗ ಏಸುಕ್ರಿಸ್ತನ ಫೋಟೋ…! ರಾಮನಗರದಲ್ಲಿ ಹೊಸ ವಿವಾದ

ರಾಮನಗರ: ರಾಜ್ಯದಲ್ಲಿ ಧರ್ಮದ ಕಿಚ್ಚು ಬೂದಿ ಮುಚ್ವಿದ ಕೆಂಡದಂತಿದೆ. ಆಗಾಗ ಇದು ಹೊಗೆಯಾಡುತ್ತಲೇ ಇದೆ. ಹಿಜಾಬ್ ನಿಂದ ಶುರುವಾದ ಧರ್ಮದ ವಿಚಾರ ಇದೀಗ ಪಡಿತರದವರೆಗೂ ಬಂದಿದೆ. ಪಡಿತರ ಚೀಟಿಯ ಹಿಂಭಾಗ ಏಸು ಭಾವಚಿತ್ರ ಹಾಕಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಹೌದು, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಪಡಿತರ ಚೀಟಿ ಹಿಂದೆ ಏಸು ಕ್ರಿಸ್ತನ ಫೋಟೋ ಇದೆ. ಈ ಭಾಗದ ಬಹುತೇಕರಿಗೆ ಇದೇ ರೀತಿಯ ಕಾರ್ಡ್ ನೀಡಲಾಗಿದೆಯಂತೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇವೆ. ಅಷ್ಟೆ ಅಲ್ಲ ಈ ವಿಚಾರವಾಗಿ ಹಿಂದೂ ಪರ ಸಂಘಟನೆಗಳ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಸಂಬಂಧ ಶ್ರೀರಾಮಸೇನೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದು, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಮಾತಾಡಿರುವ ಫುಡ್ ಡಿಡಿ, ನಮ್ಮ ಇಲಾಖೆಯಿಂದ ಈ ರೀತಿಯ ಯಾವುದೇ ಕಾರ್ಡ್‌ಗಳನ್ನು ವಿತರಣೆ ಮಾಡಿಲ್ಲ. ಕಾರ್ಡ್ ಲ್ಯಾಮಿನೇಷನ್ ಮತ್ತು ಕವರ್ ಹಾಕಿಸಿಕೊಳ್ಳುವ ವೇಳೆ ಈ ರೀತಿ ಆಗಿರಬಹುದು. ಇದಕ್ಕೂ ಇಲಾಖೆಗೂ ಸಂಬಂಧವಿಲ್ಲ ಎಂದಿದ್ದಾರೆ. ಹಾಗೆಯೇ ಇದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...