alex Certify ಪಕ್ಷದ ಭದ್ರಕೋಟೆಯಲ್ಲಿ ಕಣಕ್ಕಿಳಿದ ಅಖಿಲೇಶ್; ಸಮಾಜವಾದಿ ಪಕ್ಷದಿಂದ ಅಧಿಕೃತ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷದ ಭದ್ರಕೋಟೆಯಲ್ಲಿ ಕಣಕ್ಕಿಳಿದ ಅಖಿಲೇಶ್; ಸಮಾಜವಾದಿ ಪಕ್ಷದಿಂದ ಅಧಿಕೃತ ಘೋಷಣೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಪಡೆಯಲು ಕಸರತ್ತು ನಡೆಸುತ್ತಿರುವ ಸಮಾಜವಾದಿ ಪಕ್ಷವು ತನ್ನದೇ ಆದ ರಣತಂತ್ರಗಳನ್ನು ಹೂಡುತ್ತಿದೆ.

ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್​ ಯಾದವ್​ ಮುಂದಿನ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭದ್ರಕೋಟೆ ಕರ್ಹಾಲ್​​ನಲ್ಲಿ ಸ್ಫರ್ಧಿಸುವುದು ಕನ್ಫರ್ಮ್​ ಆಗಿದೆ.

ಪಕ್ಷದ ಮೂಲಗಳು ಈ ವಿಚಾರವನ್ನು ಮೊದಲೇ ತಿಳಿಸಿದ್ದವು. ಆದರೆ ಇಂದು ಅಖಿಲೇಶ್​ ಯಾದವ್​ ಸಂಬಂಧಿ ಹಾಗೂ ರಾಜ್ಯಸಭಾ ಸದಸ್ಯ ರಾಮ್​ ಗೋಪಾಲ್​ ಯಾದವ್​ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ನನ್ನ ಸೋದರಳಿಯ ಕರ್ಹಾಲ್​ನಲ್ಲಿ ಸ್ಪರ್ಧಿಸುತ್ತಾರೆ ಹಾಗೂ ಭಾರೀ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

1993ರಿಂದಲೂ ಕರ್ಹಾಲ್​ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾ ಬಂದಿದ್ದಾರೆ. ಆದರೆ 2002ರಲ್ಲಿ ಬಿಜೆಪಿಯು ಈ ಕ್ಷೇತ್ರದಲ್ಲಿ ಜಯವನ್ನು ಸಾಧಿಸಿತ್ತು. ಅಖಿಲೇಶ್​ ಯಾದವ್​ ಕುಟುಂಬದ ಮೂಲ ಊರಾದ ಸೈಫಾಯಿಯಿಂದ ಕರ್ಹಾಲ್​​​ ಕೇವಲ 5 ಕಿಲೋಮೀಟರ್​ ಅಂತರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...