alex Certify ನಿನ್ನ ಕಂಗ್ರಾಟ್ಸ್ ಬೇಡ, ಏನು ಬೇಡ; ಸ್ವಪಕ್ಷೀಯ ಶಾಸಕನ ವಿರುದ್ಧ ಸಿಎಂ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿನ್ನ ಕಂಗ್ರಾಟ್ಸ್ ಬೇಡ, ಏನು ಬೇಡ; ಸ್ವಪಕ್ಷೀಯ ಶಾಸಕನ ವಿರುದ್ಧ ಸಿಎಂ ಗರಂ

ಮಂಗಳವಾರ ರಾತ್ರಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಹಿಂದೂ ಸಂಘಟನೆಗಳ ಪರ ಕಾರ್ಯಕರ್ತರಲ್ಲದೆ ಬಿಜೆಪಿಯ ಕೆಲ ಶಾಸಕರುಗಳು ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದು, ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ, ‘ನಮ್ಮ ಸರ್ಕಾರ ಇದ್ದರೂ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸಾರಿ ಪ್ರವೀಣ್’ ಎಂದು ಟ್ವೀಟ್ ಮಾಡಿದ್ದರು.

ಗುರುವಾರ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ಶಾಸಕ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಅಭಿನಂದಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಗರಂ ಆದ ಬಸವರಾಜ ಬೊಮ್ಮಾಯಿ, ನಿನ್ನ ಕಂಗ್ರಾಟ್ಸ್ ಬೇಡ. ಏನು ಬೇಡ. ಏನೇನೋ ಟ್ವೀಟ್ ಮಾಡಿದ್ದೀಯಲ್ಲ. ನೀನು ಸರ್ಕಾರದ ಭಾಗ ಎಂಬುದನ್ನು ಮರೆತೆಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...