alex Certify ನಟಿ ಕತ್ರಿನಾಗೆ ಜೀವ ಬೆದರಿಕೆ ಹಾಕಿದ್ದವನು ಅಂದರ್..!‌ ವಿಚಾರಣೆ ವೇಳೆ ಅಸಲಿ ಕಾರಣ ತಿಳಿದು ದಂಗಾದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕತ್ರಿನಾಗೆ ಜೀವ ಬೆದರಿಕೆ ಹಾಕಿದ್ದವನು ಅಂದರ್..!‌ ವಿಚಾರಣೆ ವೇಳೆ ಅಸಲಿ ಕಾರಣ ತಿಳಿದು ದಂಗಾದ ಪೊಲೀಸರು

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ದಂಪತಿ ಮುಂಬೈನ ಸಾಂತಾಕ್ರೂಝ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದಕ್ಕೂ ಮುನ್ನ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೂ ಜೀವ ಬೆದರಿಕೆ ಬಂದಿದ್ದ ಕಾರಣ ಅವರ ಭದ್ರತೆಯನ್ನು ಹೆಚ್ಚಿಸಿದ್ದ ಪೊಲೀಸರು, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪ್ರಕರಣವನ್ನೂ ಸಹ ಗಂಭೀರವಾಗಿ ಪರಿಗಣಿಸಿದ್ದರು.

ಇದೀಗ ಕತ್ರಿನಾ – ವಿಕ್ಕಿ ಕೌಶಲ್ ಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಿದ್ದ ನಟ ಮನ್ವಿಂದರ್ ಸಿಂಗ್ ಎಂಬಾತನನ್ನು ಸೋಮವಾರದಂದು ಬಂಧಿಸಲಾಗಿದೆ. ಆತನ ವಿಚಾರಣೆ ವೇಳೆ ಬೆದರಿಕೆ ಹಾಕಿದ ಹಿಂದಿನ ಕಾರಣವನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಮನ್ವಿಂದರ್ ಸಿಂಗ್, ಕತ್ರಿನಾ ಕೈಫ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಆಕೆಯನ್ನು ಮದುವೆಯಾಗುವ ಬಯಕೆ ಹೊಂದಿದ್ದ ಎನ್ನಲಾಗಿದೆ. ಆದರೆ ಕತ್ರಿನಾ, ವಿಕ್ಕಿ ಕೌಶಲ್ ಜೊತೆ ಮದುವೆಯಾಗುತ್ತಿದ್ದಂತೆ ಹತಾಶೆಗೊಳಗಾಗಿದ್ದ ಆತ ಕತ್ರಿನಾ ತನ್ನ ಜೊತೆಗಿರುವಂತೆ ಫೋಟೋಗಳನ್ನು ಎಡಿಟ್ ಮಾಡಿದ್ದ. ಅಷ್ಟೇ ಅಲ್ಲ ಜೀವ ಬೆದರಿಕೆಯನ್ನೂ ಹಾಕಿದ್ದ. ಇದೀಗ ಮನ್ವಿಂದರ್ ಜೈಲು ಪಾಲಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...