alex Certify ದಿನಸಿ ತರಲೆಂದು ಅಂಗಡಿಗೆ ತೆರಳಿ ಉಕ್ರೇನ್​ನಲ್ಲಿ ಪ್ರಾಣ ಕಳೆದುಕೊಂಡ ಕನ್ನಡಿಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಸಿ ತರಲೆಂದು ಅಂಗಡಿಗೆ ತೆರಳಿ ಉಕ್ರೇನ್​ನಲ್ಲಿ ಪ್ರಾಣ ಕಳೆದುಕೊಂಡ ಕನ್ನಡಿಗ….!

ಯುದ್ಧಪೀಡಿತ ಉಕ್ರೇನ್​ನ ಖಾರ್ಕಿವ್​ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಶೆಲ್​ ದಾಳಿಗೆ ಕನ್ನಡಿಗ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ವಿದ್ಯಾರ್ಥಿಯನ್ನು ನವೀನ್​ ಶೇಖರಪ್ಪ ಗ್ಯಾನಗೌಡರ್​ ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಯು ಆಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆಯಲ್ಲಿ ಶೆಲ್​ ದಾಳಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಉಕ್ರೇನ್​ನಲ್ಲಿ ನವೀನ್​ ಶೇಖರಪ್ಪ ಎಂಬವರ ದುರದೃಷ್ಟಕರ ಸಾವನ್ನು ವಿದೇಶಾಂಗ ಸಚಿವಾಲಯದಿಂದ ಧೃಡಪಡಿಸಿದೆ. ಮೃತ ನವೀನ್​ ಹಾವೇರಿಯ ಚಳಗೇರಿಯವರು. ನವೀನ್​ ಅಗತ್ಯ ವಸ್ತುವನ್ನು ಖರೀದಿಸಲು ಹತ್ತಿರದ ಅಂಗಡಿಯೊಂದಕ್ಕೆ ತೆರಳಿದ್ದರು. ನವೀನ್​ ಸ್ನೇಹಿತರು ಅವರು ಮೃತಪಟ್ಟ ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎಸ್​ಡಿಎಂಎ ಆಯುಕ್ತ ಮನೋಜ್​ ರಾಜನ್​ ಹೇಳಿದರು.

ಇಂದು ಬೆಳಗ್ಗೆ ಖಾರ್ಕಿವ್​ನಲ್ಲಿ ನಡೆದ ಶೆಲ್​ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂಬುದನ್ನು ನಾವು ಭಾರವಾದ ಹೃದಯದಿಂದ ಧೃಡೀಕರಿಸುತ್ತಿದ್ದೇವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್​ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...