alex Certify ದಂಗಾಗಿಸುವಂತಿದೆ ಸಾಕ್ಷ್ಯ ನಾಶ ಮಾಡಲು ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಮಾಡಿರುವ ತಂತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಸಾಕ್ಷ್ಯ ನಾಶ ಮಾಡಲು ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಮಾಡಿರುವ ತಂತ್ರ…!

ಪಿಎಸ್ಐ ನೇಮಕಾತಿ ಅಕ್ರಮದ ಹಲವು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಹೆಡೆಮುರಿ ಕಟ್ಟಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಕರಣದ ಕಿಂಗ್ ಪಿನ್ ಗಳಾದ ದಿವ್ಯ ಹಾಗರಗಿ, ಮಂಜುನಾಥ ಮೇಳಕುಂದಿ ಸೇರಿದಂತೆ ಕೆಲವರಿಂದ ಹೆಚ್ಚಿನ ವಿವರಗಳನ್ನು ಬಾಯಿ ಬಿಡಿಸಲು ಶತ ಪ್ರಯತ್ನ ನಡೆಸಿದ್ದಾರೆ.

ಇದರ ಮಧ್ಯೆ ವಿಚಾರಣೆ ನಡುವೆ ಒಂದೊಂದೇ ಕುತೂಹಲಕರ ವಿಷಯಗಳು ಬೆಳಕಿಗೆ ಬರುತ್ತಿದ್ದು, ಅದರಲ್ಲೂ ಸಾಕ್ಷ್ಯ ನಾಶಮಾಡಲು ಆರೋಪಿಗಳು ಅನುಸರಿಸಿರುವ ತಂತ್ರ ದಂಗಾಗಿಸುವಂತಿದೆ. ಯಾವುದೇ ಅಪರಾಧಗಳ ಸಂದರ್ಭದಲ್ಲಿ ಮೊಬೈಲ್ ಅತ್ಯಂತ ಪ್ರಮುಖ ಸಾಕ್ಷ್ಯವಾಗುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಆರೋಪಿಗಳು ಮೊಬೈಲ್ ನಾಶಮಾಡಲು ವಿವಿಧ ತಂತ್ರಗಳಿಗೆ ಮೊರೆಹೋಗಿದ್ದಾರೆ.

ದಿವ್ಯ ಹಾಗರಗಿ ತಮ್ಮ ಬಂಧನಕ್ಕೂ ಮುನ್ನ ತಾವು ಬಳಸುತ್ತಿದ್ದ ಮೊಬೈಲನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದರೆ ಪ್ರಕರಣದ ಮತ್ತೊಬ್ಬ ಆರೋಪಿ ಮಂಜುನಾಥ ಮೇಳಕುಂದಿ ಆಳಂದ ತಾಲೂಕಿನಲ್ಲಿರುವ ಅಮರ್ಜಾ ಡ್ಯಾಮಿಗೆ ತನ್ನ ಮೊಬೈಲನ್ನು ಎಸೆದಿದ್ದಾನೆ. ಡ್ಯಾಮ್ ಸಂಪೂರ್ಣ ನೀರಿನಿಂದ ತುಂಬಿದ್ದು ಈ ಹಿನ್ನೆಲೆಯಲ್ಲಿ ಇದೀಗ ಅಧಿಕಾರಿಗಳು ಮುಳುಗು ತಜ್ಞರನ್ನು ಕರೆಸಿ ಮೊಬೈಲ್ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...