alex Certify ತಡವಾಗಿದೆ ಹುಷಾರಾಗಿ ಹೋಗು ಎಂದಿದ್ದರು ವಿನಯ್ ಗುರೂಜಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡವಾಗಿದೆ ಹುಷಾರಾಗಿ ಹೋಗು ಎಂದಿದ್ದರು ವಿನಯ್ ಗುರೂಜಿ…!

ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಗುರುವಾರದಂದು ಶವವಾಗಿ ಪತ್ತೆಯಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ತುಂಗಾ ಕಾಲುವೆಗೆ ಬಿದ್ದಿದ್ದು, ಸಾವಿನ ಕಾರಣ ಇನ್ನೂ ನಿಗೂಢವಾಗಿದೆ.

ಇದರ ಮಧ್ಯೆ ಅಕ್ಟೋಬರ್ 30ರಂದು ಚಂದ್ರಶೇಖರ್, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ರಾತ್ರಿ 9:00 ಗಂಟೆ ಸುಮಾರಿಗೆ ತೆರಳಿದ್ದರು ಎನ್ನಲಾಗಿದ್ದು, ಆಶ್ರಮದ ಮೂಲಗಳು ಸಹ ಇದನ್ನು ಖಚಿತಪಡಿಸಿವೆ.

ಕೆಲ ಹೊತ್ತು ವಿನಯ್ ಗುರೂಜಿ ಅವರ ಜೊತೆ ಮಾತನಾಡಿದ ಚಂದ್ರಶೇಖರ್, 9:40ರ ಸುಮಾರಿಗೆ ಅಲ್ಲಿಂದ ಹೊರಟಿದ್ದು, ಈ ವೇಳೆ ವಿನಯ್ ಗುರೂಜಿ, ಇಷ್ಟು ತಡವಾಗಿ ಯಾಕೆ ಬಂದಿದ್ದೀಯಾ ಎಂದು ಕಿವಿಮಾತು ಹೇಳಿದ್ದರಲ್ಲದೆ ರಾತ್ರಿಯಾಗಿದೆ ಹುಷಾರಾಗಿ ಹೋಗು ಎಂದಿದ್ದರಂತೆ.

ಅಲ್ಲಿಂದ ಹೊರಟ ಚಂದ್ರಶೇಖರ್ ಶಿವಮೊಗ್ಗಕ್ಕೆ ಬಂದು ತಮ್ಮ ಸ್ನೇಹಿತ ಕಿರಣ್ ನನ್ನು ಬಿಟ್ಟು ಬಳಿಕ ಹೊನ್ನಾಳಿಗೆ ತೆರಳುತ್ತಿದ್ದರು. ಅಂದು ರಾತ್ರಿ ಬಳಿಕ ಚಂದ್ರಶೇಖರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತಲ್ಲದೆ ಯಾವ ಸುಳಿವು ಸಹ ಸಿಕ್ಕಿರಲಿಲ್ಲ. ಈಗ ಗುರುವಾರದಂದು ಅವರು ಶವವಾಗಿ ಪತ್ತೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...