alex Certify ಟ್ರಾಕ್ಟರ್ ತೊಳೆಯುತ್ತಿದ್ದಾಗಲೇ ದುರಂತ; ವಿದ್ಯುತ್ ತಗುಲಿ ಬಾಲಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಕ್ಟರ್ ತೊಳೆಯುತ್ತಿದ್ದಾಗಲೇ ದುರಂತ; ವಿದ್ಯುತ್ ತಗುಲಿ ಬಾಲಕ ಸಾವು

ಭಾನುವಾರದಂದು ಮನೆ ಬಳಿ ಟ್ರಾಕ್ಟರ್ ತೊಳೆಯುತ್ತಿದ್ದ 15 ವರ್ಷದ ಬಾಲಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ಸಮೀಪದ ಸುರಹೊನ್ನೆ ಗ್ರಾಮದಲ್ಲಿ ನಡೆದಿದೆ.

ದರ್ಶನ್ ಮೃತಪಟ್ಟ ಬಾಲಕನಾಗಿದ್ದು, ಈತ ನ್ಯಾಮತಿಯ ಕೆಪಿಎಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣನಾಗಿದ್ದ. ಇಂದಿನಿಂದ ಹತ್ತನೇ ತರಗತಿಗೆ ಹಾಜರಾಗಬೇಕಿದ್ದ ಬಾಲಕ ಈಗ ಬಾರದ ಲೋಕಕ್ಕೆ ತೆರಳಿದ್ದಾನೆ.

ಬಾಲಕನ ತಂದೆ 2020 ರ ಕೊರೊನಾ ವೇಳೆ ಮೃತಪಟ್ಟಿದ್ದು, ಇದೀಗ ಮಗನನ್ನೂ ಕಳೆದುಕೊಂಡ ಆತನ ತಾಯಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಬಾಲಕನ ಸಾವಿಗೆ ಮೋಟಾರ್ ನಿಂದ ವಿದ್ಯುತ್ ಪ್ರವಹಿಸಿದ್ದೇ ಕಾರಣ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...