alex Certify ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬೊಮ್ಮಾಯಿ ವಿರುದ್ದ ಬಿಜೆಪಿ ಶಾಸಕ ಕಿಡಿ; ಜನಬೆಂಬಲವಿಲ್ಲದ ಕಾರಣಕ್ಕೆ ಚಿತ್ರ ನಟ – ನಟಿಯರನ್ನು ಕರೆಸುತ್ತಿದ್ದಾರೆಂದು ನೆಹರು ಓಲೇಕರ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬೊಮ್ಮಾಯಿ ವಿರುದ್ದ ಬಿಜೆಪಿ ಶಾಸಕ ಕಿಡಿ; ಜನಬೆಂಬಲವಿಲ್ಲದ ಕಾರಣಕ್ಕೆ ಚಿತ್ರ ನಟ – ನಟಿಯರನ್ನು ಕರೆಸುತ್ತಿದ್ದಾರೆಂದು ನೆಹರು ಓಲೇಕರ್ ಟಾಂಗ್

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಾವೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಸಿಡಿದೆದ್ದಿರುವ ನೆಹರು ಓಲೇಕರ್ ಈಗ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಅವರು, ಬೊಮ್ಮಾಯಿ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾನೆ. 2018 ರಲ್ಲೂ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡಿದ್ದ ಎಂದರು.

ಹೀಗಾಗಿ ಆ ಸಂದರ್ಭದಲ್ಲಿ ನನಗೆ ಕೊನೆ ಕ್ಷಣದಲ್ಲಿ ಬಿ ಫಾರಂ ಬಂತು. ಆತನಿಗೆ ಸರಿಸಮನಾಗಿ ನಾನು ಬೆಳೆಯುತ್ತಿದ್ದೇನೆ ಎಂಬ ಕಾರಣಕ್ಕೆ ಈಗ ಟಿಕೆಟ್ ತಪ್ಪಿಸಿದ್ದಾನೆ. ಆತನಿಗೆ ಜನಬೆಂಬಲವಿಲ್ಲ. ಈ ಕಾರಣಕ್ಕಾಗಿಯೇ ಚಿತ್ರ ನಟ – ನಟಿಯರನ್ನು ಕರೆಸುತ್ತಿದ್ದಾನೆ ಎಂದು ಟಾಂಗ್ ನೀಡಿದ್ದಾರೆ.

ಬಿಜೆಪಿ ತೊರೆಯಲಿರುವ ನೆಹರು ಓಲೇಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜೆಡಿಎಸ್ ಸೇರ್ಪಡೆಯಾಗಿ ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...