alex Certify ಜೀವನದಲ್ಲಿ ಏಳಿಗೆ ಕಾಣಲು ವಿಷ್ಣುವಿನ ದೇವಾಲಯಕ್ಕೆ ಹೋದಾಗ ತಪ್ಪದೇ ಈ ಮೂರು ನಿಯಮ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಏಳಿಗೆ ಕಾಣಲು ವಿಷ್ಣುವಿನ ದೇವಾಲಯಕ್ಕೆ ಹೋದಾಗ ತಪ್ಪದೇ ಈ ಮೂರು ನಿಯಮ ಪಾಲಿಸಿ

ವಿಷ್ಣು ಲೋಕದ ಸಂಚಾರಕ. ಇಡೀ ಲೋಕದ ಜನರನ್ನು ರಕ್ಷಿಸುವ ಹೊಣೆ ಆತನದು. ಹಾಗಾಗಿ ಆತ ಜನರ ರಕ್ಷಣೆಗಾಗಿ ಆಗಾಗ ಅವತಾರವೆತ್ತಿ ಬರುತ್ತಾನೆ ಎಂದು ಹೇಳುತ್ತಾರೆ. ಹಾಗಾಗಿ ನೀವು ವಿಷ್ಣುವಿನ ಅವತಾರದ ಯಾವುದೇ ದೇವಾಲಯಕ್ಕೆ ಹೋದಾಗ ತಪ್ಪದೇ ಈ ಮೂರು ನಿಯಮ ಪಾಲಿಸಿದರೆ ನಿಮ್ಮ ಜೀವನದಲ್ಲಿ ಏಳಿಗೆಯಾಗುವುದು.

*ವಿಷ್ಣುವಿನ ದೇವಾಲಯಕ್ಕೆ ಹೋದಾಗ ಮೊದಲಿಗೆ ನೀವು ಸ್ವಾಮಿಯ ಹಣೆಗೆ ಹಚ್ಚಿದ ನಾಮವನ್ನು ನೋಡಬೇಕು. ಯಾಕೆಂದರೆ ದೇವರ ನಾಮದಲ್ಲಿ ಆತನ ಶಕ್ತಿ ಅಡಗಿರುತ್ತದೆ. ಬಳಿಕ ದೇವರ ದರ್ಶನ ಮಾಡಿ.

*ವಿಷ್ಣುವಿನ ದೇವಸ್ಥಾನಗಳಿಗೆ ತುಳಸಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ತುಳಸಿ ನಿಮಗೆ ಪ್ರಸಾದದ ರೂಪದಲ್ಲಿ ಸಿಕ್ಕರೆ ಅದನ್ನು ನೀವು ಮನೆಗೆ ತಂದು ಇಟ್ಟರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿ ದೂರವಾಗುತ್ತದೆ. ಹಾಗೇ ಅದು ಒಣಗಿದ ಬಳಿಕ ಹರಿಯುವ ನೀರಿನಲ್ಲಿ ಹಾಕಬೇಕು.

*ವಿಷ್ಣುವಿನ ದೇವಾಲಯದಲ್ಲಿ ವಿಷ್ಣುವಿನ ವಾಹನವಾದ ಗರುಡನ ಸ್ತಂಭ ಇರುತ್ತದೆ. ನೀವು ದೇವರ ದರ್ಶನ ಮಾಡಿದ ಬಳಿಕ ಗರುಡ ಸ್ತಂಭದ ದರ್ಶನ ಮಾಡಬೇಕು. ಇಲ್ಲವಾದರೆ ನಿಮಗೆ ಪೂಜೆಯ ಸಂಪೂರ್ಣ ಫಲ ಸಿಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...