alex Certify ಜಮೀರ್ ಮನೆ ಮೇಲೆ ED ದಾಳಿ ಹಿಂದೆ ಡಿ.ಕೆ.ಶಿ. ಕೈವಾಡ; ಸಚಿವ ಎಸ್.ಟಿ. ಸೋಮಶೇಖರ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮೀರ್ ಮನೆ ಮೇಲೆ ED ದಾಳಿ ಹಿಂದೆ ಡಿ.ಕೆ.ಶಿ. ಕೈವಾಡ; ಸಚಿವ ಎಸ್.ಟಿ. ಸೋಮಶೇಖರ್ ಟಾಂಗ್

ಮೈಸೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಎಂದು ಸಚಿವ ಎಸ್.ಟಿ. ಸೋಮಶೇಖರ ಆರೋಪಿಸಿದ್ದಾರೆ.

ಜಮೀರ್ ನಿವಾಸದ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಎಂಬ ಡಿ.ಕೆ.ಶಿ. ಆರೋಪಕ್ಕೆ ತಿರುಗೇಟು ನೀಡಿರುವ ಸೋಮಶೇಖರ್, ದಾಳಿ ಹಿಂದೆ ಡಿ.ಕೆ. ಶಿವಕುಮಾರ್ ಕೈವಾಡವಿದೆ. ಪದೇ ಪದೇ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಜಮೀರ್ ಹೇಳಿಕೆ ನೀಡುತ್ತಿದ್ದರು. ಇದು ಡಿ.ಕೆ.ಶಿ.ಗೆ ಸಹಿಸಿಕೊಳ್ಳಲಾಗಿಲ್ಲ. ಅಲ್ಲದೇ ಡಿ.ಕೆ.ಶಿ.ಗೆ ಇಡಿ, ಐಟಿ ಲಿಂಕ್ ಜಾಸ್ತಿ ಇದೆ ಹಾಗಾಗಿ ಅವರೇ ದಾಳಿ ನಡೆಸಿರಬೇಕು ಎಂದಿದ್ದಾರೆ.

ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್

ಜಮೀರ್ ಅವರ ವ್ಯವಹಾರ ಸರಿಯಿಲ್ಲ ಅನ್ಸುತ್ತೆ. ವ್ಯವಹಾರ ಸರಿಯಿದ್ದರೆ ಹೆದರುವ ಅಗತ್ಯವಿಲ್ಲ. ಅಧಿಕಾರಿಗಳು ಕೇಳುವ ದಾಖಲೆ ಕೊಟ್ಟರೆ ಮುಗಿಯಿತು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...