alex Certify ಚುನಾವಣೆಗೂ ಮುನ್ನವೇ ಅಭ್ಯರ್ಥಿ ಗೆಲುವಿನ ಕುರಿತು ಕೋಟಿಗಟ್ಟಲೆ ಬಾಜಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಗೂ ಮುನ್ನವೇ ಅಭ್ಯರ್ಥಿ ಗೆಲುವಿನ ಕುರಿತು ಕೋಟಿಗಟ್ಟಲೆ ಬಾಜಿ….!

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ದಿನಾಂಕ ಘೋಷಣೆಯಾಗಿಲ್ಲವಾದರೂ ಸಹ ಪ್ರಚಾರದ ಕಾವು ಜೋರಾಗಿದೆ. ಇದರ ಜೊತೆಗೆ ಮತದಾರರಿಗೆ ಯುಗಾದಿ, ರಂಜಾನ್ ಹಬ್ಬದ ನೆಪದಲ್ಲಿ ಸೀರೆ, ಕುಕ್ಕರ್, ಆಹಾರ ಧಾನ್ಯದ ಪ್ಯಾಕೆಟ್ ಗಳನ್ನು ಗಿಫ್ಟ್ ಆಗಿ ನೀಡಲಾಗುತ್ತಿದೆ.

ಇದರ ಮಧ್ಯೆ ವ್ಯಕ್ತಿಯೊಬ್ಬರು ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ಲುವುದಾಗಿ ಹೇಳಿದ್ದು, ಇದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಬಾಜಿಗಿಡಲು ಮುಂದಾಗಿದ್ದಾರೆ. ಅವರು ನೀಡಿರುವ ಓಪನ್ ಚಾಲೆಂಜ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ನೀಲೇಗೌಡಲ ಕೊಪ್ಪಲು ಗ್ರಾಮದ ತೆಲುಗು ಗೌಡ ಸಮಾಜದ ಮುಖಂಡ ಹನುಮಂತಪ್ಪ ಈ ಸವಾಲು ಹಾಕಿದ್ದು, ‘ಈ ಬಾರಿಯ ಚುನಾವಣೆಯಲ್ಲಿ ಬೆಳ್ಳಿ ಪ್ರಕಾಶ್ ಮತ್ತೆ ಗೆಲ್ಲುತ್ತಾರೆ. ಕೋಟಿಗಟ್ಟಲೆ ಹಣ ಬಾಜಿ ಕಟ್ಟಿದರೆ ನನ್ನ ಇಡೀ ಆಸ್ತಿಯನ್ನು ಇದಕ್ಕಾಗಿ ಆಧಾರವಾಗಿಡುತ್ತೇನೆ’ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...