alex Certify ಚಿರತೆ ದಾಳಿಗೆ ಜಾನುವಾರು ಬಲಿ; ಆತಂಕದಲ್ಲಿ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ ದಾಳಿಗೆ ಜಾನುವಾರು ಬಲಿ; ಆತಂಕದಲ್ಲಿ ಜನ

ಚಿರತೆ ದಾಳಿಗೆ ಜಾನುವಾರು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಸುಣ್ಣದಮನೆ ಗ್ರಾಮದ ಲಲಿತಮ್ಮ ಎಂಬವರ ಜಾನುವಾರು ಮೇಯಲು ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಅರೆಬರೆ ತಿಂದ ಸ್ಥಿತಿಯಲ್ಲಿ ಜಾನುವಾರು ಪತ್ತೆಯಾಗಿದೆ.

ಚಿರತೆ ದಾಳಿ ಕಾರಣಕ್ಕೆ ಜಾನುವಾರು ಬಲಿಯಾಗಿದೆ ಎಂದು ಹೇಳಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಿಂದ ಕಾಲ ಕಳೆಯುವಂತಾಗಿದೆ. ಸ್ಥಳಕ್ಕೆ ಮೇಗರವಳ್ಳಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...