alex Certify ‘ಚಿನ್ನ’ ಖರೀದಿಗೆ ಬಂದಿದ್ದಾಗಲೇ 3 ಲಕ್ಷ ರೂಪಾಯಿ ಕಳವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚಿನ್ನ’ ಖರೀದಿಗೆ ಬಂದಿದ್ದಾಗಲೇ 3 ಲಕ್ಷ ರೂಪಾಯಿ ಕಳವು

ಚಿನ್ನ ಖರೀದಿಸುವ ಸಲುವಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ಕಳವು ಮಾಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ರತ್ನಮ್ಮ ಎಂಬವರು ತಮ್ಮ ಪತಿ ಹಾಗೂ ಅವರ ಸಹೋದರಿ ಜೊತೆ ಚಿನ್ನ ಖರೀದಿಸುವ ಸಲುವಾಗಿ ಶಿವಮೊಗ್ಗ ನಗರಕ್ಕೆ ಬಂದಿದ್ದರು.

ಎರಡು ಅಂಗಡಿಗಳಿಗೆ ಭೇಟಿ ನೀಡಿದ ಬಳಿಕ ಚಿನ್ನ ಖರೀದಿಸದೆ ಅವರುಗಳು KSRTC ಬಸ್ ನಲ್ಲಿ ವಾಪಸ್ ಊರಿಗೆ ಹೊರಟಿದ್ದು, ಹೊಳೆ ಬಸ್ ನಿಲ್ದಾಣದ ಬಳಿ ಟಿಕೆಟ್ ಖರೀದಿಸಿದ್ದಾರೆ.

ಈ ಸಂದರ್ಭದಲ್ಲಿ ರತ್ನಮ್ಮ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ಕಳವು ಮಾಡಲಾಗಿದ್ದು, ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...