alex Certify ಗುವಾಹಟಿಗೆ ಬರುವಂತೆ ನನಗೂ ಆಫರ್​ ಬಂದಿತ್ತು: ಸಂಜಯ್​ ರಾವತ್​ ಸ್ಫೋಟಕ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುವಾಹಟಿಗೆ ಬರುವಂತೆ ನನಗೂ ಆಫರ್​ ಬಂದಿತ್ತು: ಸಂಜಯ್​ ರಾವತ್​ ಸ್ಫೋಟಕ ಹೇಳಿಕೆ

ಮಾಫಿಯಾ ಮಾದರಿಯಲ್ಲಿ ಕೆಲಸ ಮಾಡುತ್ತಿವೆ ಕೇಂದ್ರ ತನಿಖಾ ಸಂಸ್ಥೆಗಳು : ಸಂಜಯ್ ರಾವತ್ – EESANJE / ಈ ಸಂಜೆ

ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ ಸರ್ಕಾರ ಪತನಗೊಳ್ಳಲು ಕಾರಣವಾದ ಬಂಡಾಯ ಶಾಸಕರ ಬಗ್ಗೆ ಶಿವಸೇನೆ ನಾಯಕ ಸಂಜಯ್​ ರಾವತ್​ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಗುವಾಹಟಿಯಲ್ಲಿ ಬಂಡಾಯ ಶಾಸಕರನ್ನು ಸೇರಿಕೊಳ್ಳಲು ನನಗೂ ಆಫರ್​ ನೀಡಿದ್ದರು ಎಂದು ಶಿವಸೇನೆ ನಾಯಕ ಸಂಜಯ್​ ರಾವತ್​ ಹೇಳಿದ್ದಾರೆ. ನನಗೂ ಗುವಾಹಟಿಗೆ ತೆರಳುವ ಆಫರ್​ ಸಿಕ್ಕಿತ್ತು. ಆದರೆ ನಾನು ಎಂದಿಗೂ ಬಾಳಾ ಸಾಹೇಬ್​ ಠಾಕ್ರೆ ನಡೆದು ಬಂದ ಹಾದಿಯನ್ನೇ ಅನುಸರಿಸುತ್ತೇನೆ. ಹೀಗಾಗಿ ನಾನು ಅಲ್ಲಿಗೆ ಹೋಗಲಿಲ್ಲ ಎಂದು ಹೇಳಿದರು.

ನಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ . ಹೀಗಾಗಿ ನಾನು ವಿಶ್ವಾಸದಿಂದಲೇ ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳಿದ್ದೆ. 10 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿ ಅಲ್ಲಿಂದ ಹಿಂದಿರುಗಿದೆ. ನಾನು ಗುವಾಹಟಿಗೂ ಹೋಗಬಹುದಿತ್ತು. ಆದರೆ ನಾನು ಬಾಳಾ ಸಾಹೇಬರ ಸೈನಿಕ. ಸತ್ಯ ನಿಮ್ಮ ಕಡೆಗೆ ಇದ್ದಾಗ ಯಾರ ಭಯವೇಕೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆಗೆ ಪರೋಕ್ಷ ಟಾಂಗ್​ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...