alex Certify ಗಾಯಗಳನ್ನು ವಾಸಿ ಮಾಡುವಲ್ಲಿ ಸಹಾಯಕ ʼಬಾಳೆಹಣ್ಣುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಗಳನ್ನು ವಾಸಿ ಮಾಡುವಲ್ಲಿ ಸಹಾಯಕ ʼಬಾಳೆಹಣ್ಣುʼ

ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಜನಸಾಮಾನ್ಯರ ಕೈಗೆಟುಕಬಲ್ಲ ಹಣ್ಣುಗಳಲ್ಲಿ ಒಂದು ಬಾಳೆಹಣ್ಣು.

ಅಧಿಕ ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸುಟ್ಟ ಗಾಯಗಳಿಗೂ ಉಪಯೋಗಕ್ಕೆ ಬರುತ್ತದೆ. ಅದು ಹೇಗೆ ಅಂತ ನೋಡಿ.

* ಸುಟ್ಟ ಗಾಯಗಳಿಗೆ ಹಿಸುಕಿದ ಬಾಳೆಹಣ್ಣಿನ ಲೇಪನ ಮಾಡುವುದರಿಂದ ಉರಿ ಶಮನವಾಗುತ್ತದೆ ಗಾಯ ಬೇಗ ಮಾಡಲು ಸಹಕಾರಿ.

* ಗಾಜಿನ ಚೂರುಗಳನ್ನು ತುಳಿದು ಗಾಯಗಳು ಉಂಟಾದಾಗ ಬಾಳೆಹಣ್ಣಿನ ಸಿಪ್ಪೆಯ ಪ್ಲಾಸ್ಟರ್ ಹಾಕಿ ಸ್ವಲ್ಪ ಸಮಯದ ನಂತರ ತೆಗೆದರೆ ಗಾಜು ಸುಲಭವಾಗಿ ಹೊರಬರುತ್ತದೆ.

* ಸೊಳ್ಳೆ ಕಡಿತದಿಂದ ಗಾಯಗಳು ಉಂಟಾದರೆ ಬಾಳೆಹಣ್ಣಿನ ಸಿಪ್ಪೆಯಿಂದ ತಿಕ್ಕಿದರೆ ಬಾವು, ತುರಿಕೆ ಕಡಿಮೆಯಾಗುತ್ತದೆ.

* ಬಾಳೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯೊಂದಿಗೆ ಅರೆದು ಲೇಪಿಸಿದರೆ ತುರಿಕೆ, ಕಜ್ಜಿಗಳು ಮಾಯವಾಗುತ್ತವೆ.

* ಬಾಳೆಹಣ್ಣನ್ನು ತುಪ್ಪದಲ್ಲಿ ಹುರಿದು ಕಲ್ಲುಸಕ್ಕರೆ, ಜೇನುತುಪ್ಪ, ಏಲಕ್ಕಿ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಮಹಿಳೆಯರ ಸಮಸ್ಯೆಯಾದ ಬಿಳಿಸೆರಗು ನಿಯಂತ್ರಣದಲ್ಲಿರುತ್ತದೆ.

* ಅಧಿಕ ರಕ್ತದೊತ್ತಡ ಇರುವವರು ದಿನಕ್ಕೆರಡು ಬಾರಿ ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಈ ಮೂಲಕ ಹೃದಯದ ಮೇಲಿನ ಭಾರ ಕಡಿಮೆಯಾಗಿ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...