alex Certify ಗಮನಿಸಿ: ಇಂದು ಸಂಜೆಯಿಂದ 12 ಗಂಟೆಗಳ ಕಾಲ ರಿಪ್ಪನ್ ಪೇಟೆ – ಆಯನೂರು ಮಾರ್ಗ ‘ಬಂದ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಇಂದು ಸಂಜೆಯಿಂದ 12 ಗಂಟೆಗಳ ಕಾಲ ರಿಪ್ಪನ್ ಪೇಟೆ – ಆಯನೂರು ಮಾರ್ಗ ‘ಬಂದ್’

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ರೈಲ್ವೆ ಮಾರ್ಗದ ಲೆವೆಲ್ ಕ್ರಾಸಿಂಗ್ ನಂಬರ್ 92ರ ಗೇಟ್ ನ ತಾಂತ್ರಿಕ ಪರಿಶೀಲನೆ ಕಾರ್ಯ ಇರುವ ಕಾರಣಕ್ಕೆ ಇಂದು ಸಂಜೆಯಿಂದ 12 ಗಂಟೆಗಳ ಕಾಲ ರಿಪ್ಪನ್ ಪೇಟೆ -ಆಯನೂರು ಮಾರ್ಗದ ವಾಹನ ಸಂಚಾರ ನಿಷೇಧಿಸಲಾಗಿದೆ.

ಶುಕ್ರವಾರ ಸಂಜೆ 7 ಗಂಟೆಯಿಂದ ಶನಿವಾರ ಬೆಳಿಗ್ಗೆ 7 ಗಂಟೆವರೆಗೆ ಗೇಟ್ ಬಂದ್ ಮಾಡಲಾಗುತ್ತಿದ್ದು, ದ್ವಿಚಕ್ರ ವಾಹನಗಳ ಸಂಚಾರಕ್ಕೂ ಅವಕಾಶವಿರುವುದಿಲ್ಲವೆಂದು ತಿಳಿಸಲಾಗಿದೆ. ಇದರ ಜೊತೆಗೆ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಪರ್ಯಾಯ ಮಾರ್ಗಗಳನ್ನೂ ಸಹ ಸೂಚಿಸಲಾಗಿದೆ.

ಆಯನೂರಿನಿಂದ ರಿಪ್ಪನ್ ಪೇಟೆ ಮೂಲಕ ಹೊಸನಗರ ಕಡೆಗೆ ಹೋಗುವ ಭಾರಿ ಸರಕು ವಾಹನಗಳು ಆಯನೂರು – ಆನಂದಪುರ – ಬಟ್ಟೆ ಮಲ್ಲಪ್ಪ – ಮಾವಿನಕೊಪ್ಪ ಮುಖಾಂತರ ಸಂಚರಿಸಬಹುದಾಗಿದೆ. ಹಾಗೆಯೇ ಆಯನೂರಿನಿಂದ ರಿಪ್ಪನ್ ಪೇಟೆ ಕಡೆಗೆ ಬರುವ ಲಘು ವಾಹನಗಳು ಆಯನೂರು – 5ನೇ ಮೈಲಿಕಲ್ – ಹಾರೋಹಿತ್ತಲು – ಮೂಗೂಡ್ತಿ ಮೂಲಕ ಸಂಚರಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...