alex Certify ಗಣಪತಿ ಮೂರ್ತಿ ಖರೀದಿ ವೇಳೆ ನೆನಪಿರಲಿ ಈ ವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಪತಿ ಮೂರ್ತಿ ಖರೀದಿ ವೇಳೆ ನೆನಪಿರಲಿ ಈ ವಿಷ್ಯ

ಇಂದು ಚೌತಿ ಹಬ್ಬ ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ ಗಣಪತಿ ಮೂರ್ತಿ ತರುವ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.

ಗಣೇಶ ಮೂರ್ತಿ ಖರೀದಿಗೆ ಹೋಗುವ ವೇಳೆ ಶುದ್ಧ ಹಾಗೂ ಹೊಸ ವಸ್ತ್ರವನ್ನು ಧರಿಸಿ ಹೋಗಿ. ಗಣಪತಿ ಸೊಂಡಿಲು ಎಡಕ್ಕಿರುವಂತೆ ನೋಡಿಕೊಳ್ಳಿ. ದೊಡ್ಡ ಸೊಂಡಿಲಿನ ಮೂರ್ತಿ ಬಹಳ ಶುಭಕರ.

ಮನೆಗೆ ಮೂರ್ತಿ ತಂದ ಮೇಲೆ ಬೆಳ್ಳಿ ಬಟ್ಟಲಿನ ಮೇಲೆ ಸ್ವಸ್ಥಿಕವನ್ನು ಬಿಡಿಸಿ ನಂತ್ರ ಅದ್ರ ಮೇಲೆ ಮೂರ್ತಿ ಇಡಿ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತ್ರ ಪೂಜೆ ಬಗ್ಗೆ ಗಮನವಿರಲಿ. ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ. ಬೆಳಿಗ್ಗೆ ಹಾಗೂ ಸಂಜೆ ದೀಪ ಬೆಳಗಿ ಪೂಜೆ ಮಾಡಬೇಕು.

ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡಿ. ರಾಸಾಯನಿಕ ಬಣ್ಣ ಬಳಿದ ಸುಂದರ ಗಣೇಶನ ಮೂರ್ತಿ ಎಲ್ಲರನ್ನು ಆಕರ್ಷಿಸುತ್ತದೆ. ಆದ್ರೆ ಅದು ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಪರಿಸರ ಸ್ನೇಹಿ ಗಣೇಶನಿಗೆ ಆಧ್ಯತೆ ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...