alex Certify ಗಂಡು ಮಗು ಜನಿಸಿಲ್ಲವೆಂಬ ಕಾರಣಕ್ಕೆ ಹೆಣ್ಣುಶಿಶುವನ್ನು ನೆಲಕ್ಕೆ ಬಿಸಾಡಿ ಕೊಂದ ಪಾಪಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡು ಮಗು ಜನಿಸಿಲ್ಲವೆಂಬ ಕಾರಣಕ್ಕೆ ಹೆಣ್ಣುಶಿಶುವನ್ನು ನೆಲಕ್ಕೆ ಬಿಸಾಡಿ ಕೊಂದ ಪಾಪಿ….!

ಆ ಪಾಪಿ ತಂದೆಗೆ, ತನಗೆ ಗಂಡು ಮಗು ಇಲ್ಲ ಅನ್ನೋ ನೋವು ಇತ್ತು. ಒಂದಾದ ಮೇಲೆ ಒಂದು ಹೆಣ್ಣುಮಕ್ಕಳಾದ ಮೇಲೆ ಈ ಬಾರಿಯಾದರೂ ಗಂಡು ಮಗು ಆಗುತ್ತೆ ಅಂತ ಆಸೆ ಇಟ್ಟುಕೊಂಡಿದ್ದ. ಆದರೆ ಈ ಬಾರಿಯೂ ಆತ ಹೆಣ್ಣು ಮಗುವಿನ ತಂದೆಯಾಗಿದ್ದ. ಮತ್ತೆ ಹೆಣ್ಣು ಮಗು ಅನ್ನೊ ಸುದ್ದಿ ಕೇಳಿದ್ದೇ ತಡ ಅಸಮಾಧಾನಗೊಂಡಿದ್ದ ಆತ, ಆಸ್ಪತ್ರೆಗೆ ಬಂದು ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನ ಎತ್ತಿ ನೆಲಕ್ಕೆ ಬಿಸಾಡಿ ಸಾಯಿಸಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

ಈ ಕೂರ ಕೃತ್ಯ ಎಸಗಿದ ವ್ಯಕ್ತಿಯನ್ನ ಮೊಹಮ್ಮದ್ ಫರ್ಹಾನ್ ಎಂದು ಗುರುತಿಸಲಾಗಿದೆ. ಹೆತ್ತ ಕರುಳ ದಾರುಣ ಸಾವು ಕಂಡ ಶಬ್ಬೊ ಬೇಗಂ ತನ್ನ ಪತಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ಗಂಡ-ಹೆಂಡತಿ ರಾಜಿ ಮಾಡಿಕೊಳ್ಳುವಂತೆ ಒತ್ತಡ ತರ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಶಬೋ ಬೇಗಂ ಹೇಳಿದ್ದಾರೆ.

ಗರ್ಭಿಣಿಯಾಗಿದ್ದಾಗ ಪತಿ ತನಗೆ ಅನೇಕ ಬಾರಿ ಹೊಟ್ಟೆಗೆ ಹೊಡೆದಿದ್ದಾನೆ, ಚಿತ್ರಹಿಂಸೆ ಕೊಟ್ಟಿದ್ದಾನೆ. ಅಲ್ಲದೇ ಈಗಾಗಲೇ 2 ಹೆಣ್ಣುಮಕ್ಕಳಿದ್ದು, ಈ ಬಾರಿಯೂ ಹೆಣ್ಣುಮಗುವಿಗೆ ಜನ್ಮ ನೀಡಿದರೆ ತಲಾಖ್ ನೀಡುವುದಾಗಿ ಬೆದರಿಸಿದ್ದಾನೆ ಎಂದು ಶಬ್ಬೊ ಬೇಗಂ ಆರೋಪಿಸಿದ್ದಾರೆ. ಘಟನೆ ಕುರಿತು ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿರುವ ಸರ್ಕಲ್‌ ಆಫೀಸರ್‌ ಸುನೀಲ್ ದತ್, ಈಗಾಗಲೇ ಸಂತ್ರಸ್ತೆ ಎಫ್‌ಐಆರ್‌ ನೀಡಿರುವ ದೂರನ್ನ ದಾಖಲಿಸಿ ಅಗತ್ಯ ಕ್ರಮವನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...