alex Certify ಕೋಟ್ಯಾಂತರ ರೂಪಾಯಿ ವಿಮೆ ಹಣ ಪಡೆಯಲು ಸುಪಾರಿ ಮೂಲಕ ಪತ್ನಿಯನ್ನೇ ಹತ್ಯೆ ಮಾಡಿಸಿದ ಪಾಪಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟ್ಯಾಂತರ ರೂಪಾಯಿ ವಿಮೆ ಹಣ ಪಡೆಯಲು ಸುಪಾರಿ ಮೂಲಕ ಪತ್ನಿಯನ್ನೇ ಹತ್ಯೆ ಮಾಡಿಸಿದ ಪಾಪಿ…!

ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ: ತಲೆ, ಖಾಸಗಿ ಅಂಗದಲ್ಲಿ ಗಾಯ ಪತ್ತೆ- Kannada Prabha

ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 1.90 ಕೋಟಿ ರೂಪಾಯಿ ವಿಮೆ ಹಣ ಪಡೆಯುವ ಸಲುವಾಗಿ ಹಂತಕರಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಂತಹದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಪ್ರಕರಣದ ವಿವರ: ಮಹೇಶ್ ಎಂಬಾತ ಕೆಲವು ವರ್ಷಗಳ ಹಿಂದೆ ಶಾಲು ಎಂಬಾಕೆಯನ್ನು ವಿವಾಹವಾಗಿದ್ದು ದಂಪತಿಗಳು ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಈ ಸಂದರ್ಭದಲ್ಲಿ ಪತಿ ಆಕೆಯ ಹೆಸರಿನಲ್ಲಿ 1.90 ಕೋಟಿ ರೂಪಾಯಿ ವಿಮೆ ಮಾಡಿಸಿದ್ದಾನೆ.

ಆದರೆ ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಗುತ್ತಿದ್ದು ಇದು ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಶಾಲು, ಮಹೇಶ್ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದರು.

ಜಾಮೀನಿನ ಮೇಲೆ ಹೊರಬಂದ ಆತ ಆಕ್ರೋಶದಿಂದ ಕುದಿಯುತ್ತಿದ್ದು, ಸಂಧಾನದ ನೆಪದಲ್ಲಿ ಆಕೆಯೊಂದಿಗೆ ಮತ್ತೆ ಮಾತನಾಡಿದ್ದಾನೆ. ಅಲ್ಲದೆ ನಮ್ಮಿಬ್ಬರ ದಾಂಪತ್ಯ ಜೀವನ ಸರಿ ಹೋಗಲು 12 ಬಾರಿ ಬಾಲಾಜಿ ದೇವರ ದರ್ಶನ ಪಡೆದರೆ ಒಳ್ಳೆಯದು ಎಂದಿದ್ದಾನೆ.

ಇದನ್ನು ನಂಬಿದ ಆಕೆ ಸಹೋದರ ಸಂಬಂಧಿಸಿ ಜೊತೆ ಬೈಕಿನಲ್ಲಿ ಹೋಗುವಾಗ ಕಾರಿನಲ್ಲಿ ಬಂದ ಸುಪಾರಿ ಹಂತಕರು ಡಿಕ್ಕಿ ಹೊಡೆಸಿದ್ದು, ಇದರ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.

ಇದನ್ನು ಅಪಘಾತವೆಂಬಂತೆ ಬಿಂಬಿಸಿದ್ದ ಮಹೇಶ್, ಪತ್ನಿಯ ಹೆಸರಿನಲ್ಲಿದ್ದ ವಿಮೆ ಹಣವನ್ನು ಪಡೆದುಕೊಂಡಿದ್ದು, ಆದರೆ ಪೊಲೀಸರ ತನಿಖೆ ವೇಳೆ ನಿಜ ಸಂಗತಿ ಬಯಲಾಗಿದೆ. ಇದೀಗ ಮಹೇಶ್ ಸೇರಿದಂತೆ ಮೂವರು ಸುಪಾರಿ ಹಂತಕರನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...