alex Certify ಕೇದಾರನಾಥ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇದಾರನಾಥ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇದಾರನಾಥದ ಪವಿತ್ರ ದ್ವಾರಗಳು ಭಕ್ತರಿಗಾಗಿ ಮೇ 6ರಂದು ಬೆಳಿಗ್ಗೆ 6.25ಕ್ಕೆ ತೆರೆಯಲಿವೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಂಕ್ಷಿಪ್ತ ಧಾರ್ಮಿಕ ಸಮಾರಂಭದ ಬಳಿಕ ಭಕ್ತರಿಗೆ ಈ ಶುಭ ಸುದ್ದಿ ನೀಡಲಾಯ್ತು.

ಈ ಸಂದರ್ಭದಲ್ಲಿ ಕೇದಾರನಾಥ ದೇವಾಲಯದ ಪ್ರಮುಖ ಅರ್ಚಕರಾದ ರಾವಲ್‌ ಭೀಮಾಶಂಕರ ಲಿಂಗ್‌ ಹಾಗೂ ಬದ್ರಿ ಕೇದಾರ ಮಂದಿರ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್‌ ಕೂಡ ಉಪಸ್ಥಿತರಿದ್ದರು.

ಮೇ 6ರಂದು ವೃಶ್ಷಿಕ ಲಗ್ನದಲ್ಲಿ ಕೇದಾರನಾಥನ ಮಹಾದ್ವಾರಗಳನ್ನು ತೆರೆಯಲಾಗುವುದು. ಚಳಿಗಾಲದಲ್ಲಿ ಸಹ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು. ಆದ್ರೆ ಈ ಪ್ರದೇಶದಲ್ಲಿ ತೀವ್ರ ಹಿಮಪಾತವಾಗುತ್ತಿರುವುದರಿಂದ ದೇವಾಲಯದ ದ್ವಾರವನ್ನು ಮುಚ್ಚಲಾಗಿತ್ತು.

ಮೇ 2 ರಿಂದ್ಲೇ ಕೇದಾರನಾಥದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಲಿವೆ. ಶಿವನ ಪಂಚಮುಖಿ ಮೂರ್ತಿಯನ್ನು ಮೇ 2 ರಂದು ಇಲ್ಲಿನ ಓಂಕಾರೇಶ್ವರ ದೇವಸ್ಥಾನದಿಂದ ಕೇದಾರನಾಥಕ್ಕೆ ಹೂವಿನಿಂದ ಅಲಂಕರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...