alex Certify ಕೇಂದ್ರ ಸಚಿವರ ಆರೋಪದ ಬಳಿಕ ದಿವಂಗತ ನಟ ಸುಶಾಂತ್ ಸಿಂಗ್ ಆಪ್ತ ಸಹಾಯಕಿ ಕುಟುಂಬವನ್ನು ಭೇಟಿ ಮಾಡಿದ ಮುಂಬೈ ಮೇಯರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸಚಿವರ ಆರೋಪದ ಬಳಿಕ ದಿವಂಗತ ನಟ ಸುಶಾಂತ್ ಸಿಂಗ್ ಆಪ್ತ ಸಹಾಯಕಿ ಕುಟುಂಬವನ್ನು ಭೇಟಿ ಮಾಡಿದ ಮುಂಬೈ ಮೇಯರ್​

ಬಾಲಿವುಡ್​ ನಟ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​​ರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂಬ ಕೇಂದ್ರ ಸಚಿವ ನಾರಾಯಣ್​ ರಾಣೆ ಹೇಳಿಕೆ ವಿರುದ್ಧ ಮುಂಬೈನ ಮೇಯರ್​​ ಕಿಶೋರಿ ಪೆಡ್ನೇಕರ್​ ತೀವ್ರ ವಾಗ್ದಾಳಿ ನಡೆಸಿದರು. ಪೆಡ್ನೇಕರ್​ ದಿಶಾ ಸಾಲಿಯಾನ್​ ಕುಟುಂಬವನ್ನು ಭೇಟಿ ಮಾಡಿದ್ದಾರೆ.

ಸಾಲಿಯಾನ್​ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಮೇಯರ್ ಕಿಶೋರಿ ಪೆಡ್ನೇಕರ್, ರಾಣೆ ಹೇಳಿಕೆಯು ಅವಮಾನಕಾರಿಯಾಗಿದೆ ಹಾಗೂ ದಿಶಾ ಸಾಲಿಯಾನ್​ರ ಚಾರಿತ್ರ್ಯಕ್ಕೆ ಭಂಗ ತರುವಂತಿದೆ. ರಾಣೆಯ ಹೇಳಿಕೆಗಳಿಂದ ತಮಗೆ ನೋವಾಗಿದೆ ಎಂದು ಸಾಲಿಯಾನ್​ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಕೋರಿದ್ದೇನೆ ಎಂದು ಪೆಡ್ನೇಕರ್​ ಹೇಳಿದರು.

ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ನಾರಾಯಣ್​ ರಾಣೆ, ಸುಶಾಂತ್​ ಸಿಂಗ್​ ರಜಪೂತ್​ ಹಾಗೂ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ರ ಹತ್ಯೆಗೆ ಒಂದೇ ಕುಟುಂಬ ಕಾರಣವಾಗಿದೆ. ದಿಶಾರ ಮೇಲೆ ಸಾಮೂಹಿಕ ಅತ್ಯಾಚಾರಗೈದು ಬಳಿಕ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...