alex Certify ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್​ ಖಾನ್​ ಗೆ ಬಿಗ್​ ರಿಲೀಫ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್​ ಖಾನ್​ ಗೆ ಬಿಗ್​ ರಿಲೀಫ್​

1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ಉಂಟಾಗಿದ್ದು ಸಲ್ಮಾನ್​ ಖಾನ್​​ಗೆ ಸಂಬಂಧಿಸಿದ ಈ ಪ್ರಕರಣದ ವರ್ಗಾವಣೆಯ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಅಂಗೀಕರಿಸಿದೆ. ಈ ಆದೇಶದ ಬಳಿಕ ಇನ್ಮುಂದೆ ಜೋಧಪುರ ಹೈಕೋರ್ಟ್​ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಯಲಿದೆ.

ಸಲ್ಮಾನ್​ ಖಾನ್​​ ಕೃಷ್ಣಮೃಗ ಬೇಟೆ ಪ್ರಕರಣವು 1998 ರಲ್ಲಿ ನಡೆದ ಘಟನೆಯಾಗಿದೆ. ಸೆಪ್ಟೆಂಬರ್​ 1998ರಲ್ಲಿ ಸಲ್ಮಾನ್​ ಖಾನ್​ರ ಬಾಲಿವುಡ್​ ಸಿನಿಮಾದ ʼಹಮ್​ ಸಾಥ್​ ಸಾಥ್​ ಹೈʼ ಶೂಟಿಂಗ್​​ಗೆಂದು ರಾಜಸ್ಥಾನದ ಕಂಕಣಿಯಲ್ಲಿ ಇದ್ದಾಗ ಎರಡು ಕೃಷ್ಣಮೃಗಗಳನ್ನು ಕೊಂದಿರುವ ಆರೋಪ ಎದುರಾಗಿತ್ತು.

ಸಲ್ಮಾನ್​ ಖಾನ್​ ವಿರುದ್ಧ ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 9/51 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣದ ಆರೋಪ ಎದುರಿಸುತ್ತಿದ್ದ ಸಹನಟರಾದ ಸೋನಾಲಿ ಬೇಂದ್ರೆ, ಸೈಫ್​ ಅಲಿ ಖಾನ್​ ಹಾಗೂ ಟಬುವನ್ನು ದೋಷಮುಕ್ತಗೊಳಿಸಲಾಗಿದೆ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ದಿನೇಶ್​ ಗಾವ್ರೆ ಹಾಗೂ ದುಶ್ಯಂತ್​ ಸಿಂಗ್​ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...