alex Certify ಕಾಂಗ್ರೆಸ್​ ಪ್ರಚಾರದಿಂದ ದೂರವುಳಿದ ಅಮರಿಂದರ್​ ಸಿಂಗ್​ ಪತ್ನಿ: ನನಗೆ ಕುಟುಂಬವೇ ಮುಖ್ಯ ಎಂದ ಕೌರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್​ ಪ್ರಚಾರದಿಂದ ದೂರವುಳಿದ ಅಮರಿಂದರ್​ ಸಿಂಗ್​ ಪತ್ನಿ: ನನಗೆ ಕುಟುಂಬವೇ ಮುಖ್ಯ ಎಂದ ಕೌರ್​

ಪಂಜಾಬ್​ನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಪತ್ನಿ ಹಾಗೂ ಕಾಂಗ್ರೆಸ್​ ಸಂಸದೆ ಪ್ರಣೀತ್​ ಕೌರ್​ ಪಟಿಯಾಲ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ. ನನಗೆ ನನ್ನ ಕುಟುಂಬ ಎಲ್ಲದಕ್ಕಿಂತ ಮೊದಲು ಎಂದು ಅವರು ಹೇಳಿಕೆ ನೀಡಿದ್ದಾರೆ.

ಸಿಎಂ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ಪಡೆದ ಬಳಿಕ ಅಮರೀಂದರ್​ ಸಿಂಗ್​ ಕಳೆದ ವರ್ಷ ಕಾಂಗ್ರೆಸ್​ ಪಕ್ಷವನ್ನೇ ತೊರೆದಿದ್ದರು. ಇದಾದ ಬಳಿಕ ತಮ್ಮದೇ ಆದ ಪಕ್ಷವನ್ನು ಕಟ್ಟಿಕೊಂಡ ಅದಕ್ಕೆ ಪಂಜಾಬ್​ ಲೋಕ ಕಾಂಗ್ರೆಸ್​ ಎಂದು ಹೆಸರಿಟ್ಟಿದ್ದಾರೆ. ಪಟಿಯಾಲಯದಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಪಟಿಯಾಲದ ಕಾಂಗ್ರೆಸ್​ ಅಭ್ಯರ್ಥಿ ವಿಷ್ಣು ಶರ್ಮಾ ಪಟಿಯಾಲದ ಸಂಸದೆ ಪ್ರಣೀತ್​ ಕೌರ್​ರಿಗೆ ಒಂದೋ ಪಕ್ಷದ ಪರ ಪ್ರಚಾರ ಮಾಡಿ ಇಲ್ಲವೇ ರಾಜೀನಾಮೆ ನೀಡಿ ಎಂದು ಗುಡುಗಿದ್ದರು.

ಚುನಾವಣೆ ಸಂದರ್ಭದಲ್ಲಿ ಈ ಮೌನ ಏಕೆ ಎಂದು ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಂಸದೆ ಪ್ರಣೀತ್​ ಕೌರ್​ ನನಗೆ ನನ್ನ ಕುಟುಂಬವು ಎಲ್ಲದಕ್ಕಿಂತ ಮೇಲಿದೆ ಎಂಬ ಉತ್ತರವನ್ನು ನೀಡಿದ್ದಾರೆ.

ನಾನು ನನ್ನ ಕುಟುಂಬದ ಜೊತೆ ಇದ್ದೇನೆ. ನನಗೆ ಕುಟುಂಬವು ಎಲ್ಲದಕ್ಕಿಂತ ಮುಖ್ಯವಾಗಿದೆ ಎಂದು ಮಾಧ್ಯಮಗಳ ಎದುರು ಕೌರ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...