alex Certify ಉತ್ತರ ಪ್ರದೇಶ ಚುನಾವಣೆ: ಕಣಕ್ಕಿಳಿಯಲು ಭದ್ರಕೋಟೆಯನ್ನೇ ಆಯ್ಕೆಮಾಡಿಕೊಂಡ ಅಖಿಲೇಶ್ ಯಾದವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶ ಚುನಾವಣೆ: ಕಣಕ್ಕಿಳಿಯಲು ಭದ್ರಕೋಟೆಯನ್ನೇ ಆಯ್ಕೆಮಾಡಿಕೊಂಡ ಅಖಿಲೇಶ್ ಯಾದವ್

ಕಳೆದ ಬಾರಿ ಕೈ ತಪ್ಪಿ ಹೋಗಿದ್ದ ಅಧಿಕಾರ ಈ ಬಾರಿ ತಪ್ಪಿ ಹೋಗಬಾರದು. ಹೇಗಾದರೂ ಮಾಡಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದೇ ತೀರಬೇಕು ಎಂದು ಪಣತೊಟ್ಟಿರುವ ಸಮಾಜವಾದಿ ಪಕ್ಷ ದಿನಕ್ಕೊಂದು ರಣತಂತ್ರ ಹೂಡುತ್ತಿದೆ. ಈಗಾಗಲೇ ಯೋಗಿ ಆದಿತ್ಯನಾಥ್​ ಸಂಪುಟದ ಸದಸ್ಯರನ್ನೇ ತನ್ನ ಪಕ್ಷದತ್ತ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸಮಾಜವಾದಿ ಪಕ್ಷ ಇದೀಗ ಕ್ಷೇತ್ರ ಆಯ್ಕೆಯಲ್ಲಿಯೂ ಭಾರೀ ಮುಂಜಾಗ್ರತೆ ವಹಿಸುತ್ತಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್​ ಯಾದವ್​ ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾದವ್​ ಕುಟುಂಬ ಹೆಚ್ಚು ಬಲಶಾಲಿ ಎನಿಸಿರುವ ಕ್ಷೇತ್ರದಿಂದಲೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಉನ್ನತ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಅಖಿಲೇಶ್​ ಯಾದವ್​ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರಿಯ ಕರ್ಹಾಲ್​ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

1993 ರಿಂದಲೂ ಕರ್ಹಾಲ್​ನಲ್ಲಿ ಸಮಾಜವಾದಿ ಪಕ್ಷವೇ ವಿಜಯದ ಪತಾಕೆಯನ್ನು ಹಾರಿಸುತ್ತಾ ಬಂದಿದೆ. 2002 ಹಾಗೂ 2007ರಲ್ಲಿ ಮಾತ್ರ ಬಿಜೆಪಿಯು ಕರ್ಹಾಲ್​ನಲ್ಲಿ ಗೆಲುವಿನ ನಗೆ ಬೀರಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...