alex Certify ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿದೆ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿದೆ ಅದೃಷ್ಟ

ಮೇಷ : ಇಂದು ನೀವು ಕುಟುಂಬದ ಹಿರಿಯರನ್ನು ಭೇಟಿ ಮಾಡಲಿದ್ದೀರಿ. ಇದರಿಂದ ನೀವು ಸಂತಸದಿಂದ ಇರಲಿದ್ದೀರಿ. ನೀವು ಕನಸು ಕಂಡಿದ್ದ ಕೆಲಸವು ಇಂದು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ.

ವೃಷಭ : ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹೀಗಾಗಿ ಆಸ್ಪತ್ರೆಯ ಅಲೆದಾಟ ಇರಲಿದೆ. ನಿಮ್ಮ ಸೋಮಾರಿತನದಿಂದ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಕುಟುಂಬಸ್ಥರ ಜೊತೆ ಸೇರಿ ಕುಲದೇವರ ದರ್ಶನ ಮಾಡುವಿರಿ.

ಮಿಥುನ : ಉದ್ಯೋಗದಲ್ಲಿ ಆಲಸ್ಯ ಮೂಡಲಿದೆ. ವ್ಯಾಪಾರ – ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಾಭವಿದೆ. ಭೂಮಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಒಳ್ಳೆಯ ದಿನವಿದೆ. ಅಲಂಕಾರ ಪ್ರಿಯರಾದ ನೀವು ಸೌಂದರ್ಯವರ್ಧಕಗಳಿಗೆ ಅತಿಯಾದ ಖರ್ಚು ಮಾಡುವಿರಿ.

ಕಟಕ : ನಿಮ್ಮೆಲ್ಲ ಕಾರ್ಯಗಳಿಗೆ ತಾಯಿಯಿಂದ ಸಹಕಾರ ಸಿಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯುವ ಬಗ್ಗೆ ಚರ್ಚೆ ನಡೆಯಲಿದೆ. ಮಕ್ಕಳು ಓದಿನ ಕಡೆಗೆ ಆಸಕ್ತಿ ಕಳೆದುಕೊಳ್ಳಲಿದ್ದಾರೆ. ಇದು ನಿಮ್ಮನ್ನು ಚಿಂತೆಗೀಡು ಮಾಡಲಿದೆ.

ಸಿಂಹ : ನಿಮ್ಮೊಂದಿಗೆ ಚೆನ್ನಾಗಿಯೇ ಇದ್ದು ಬೆನ್ನ ಹಿಂದೆ ದೊಡ್ಡ ಜಾಲವನ್ನೇ ಹೆಣೆದಿದ್ದಾರೆ. ಇಂತವರಿಂದ ಎಚ್ಚರಿಕೆಯಿಂದಿರಿ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಾದಿದೆ. ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲವಿದೆ. ಆಕಸ್ಮಿಕವಾಗಿ ದೂರ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಿ ಬರಬಹುದು.

ಕನ್ಯಾ : ಉದ್ಯೋಗದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಬೇಕರಿ ಮಾಲೀಕರಿಗೆ ಇಂದು ಅನಿರೀಕ್ಷಿತ ಲಾಭವಿದೆ. ತಾಯಿಯು ಅನಾರೋಗ್ಯದಿಂದ ಆಸ್ಪತ್ರೆ ಸೇರಲಿದ್ದಾರೆ. ಮೃತ್ಯುಂಜಯ ಜಪ ಮಾಡಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ ಅನುಭವಿಸುವಿರಿ.

ತುಲಾ : ನಿಮ್ಮ ಗೊಂದಲದ ಬುದ್ಧಿಯೇ ನಿಮ್ಮ ದಾರಿ ತಪ್ಪಿಸಲಿದೆ. ಪತ್ರ ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದಾರೆ. ಕುಲದೇವರ ದರ್ಶನ ಮಾಡುವಿರಿ.

ವೃಶ್ಚಿಕ : ನಿಮ್ಮ ತಾಯಿಯ ವರ್ತನೆಯಿಂದ ನಿಮಗೆ ಕಿರಿಕಿರಿ ಎನಿಸಲಿದೆ. ಆದರೂ ತಾಳ್ಮೆ ಕಳೆದುಕೊಳ್ಳಬೇಡಿ. ಸಹನೆಯಿಂದಲೇ ಈ ಪರಿಸ್ಥಿತಿ ನಿಭಾಯಿಸಿ. ಅನಿರೀಕ್ಷಿತ ಧನಾಗಮನವಿದೆ. ಆಸ್ತಿ ಪಾಲುದಾರಿಕೆಯಲ್ಲಿ ನಷ್ಟ ಉಂಟಾಗಲಿದೆ.

ಧನು : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗಲಿದೆ. ದೈವನಿಂದನೆ ಮಾಡುವುದರಿಂದ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗುವಿರಿ. ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಲಿದೆ.

ಮಕರ : ಉದ್ಯೋಗದಲ್ಲಿ ಒತ್ತಡ ಹೆಚ್ಚಲಿದೆ. ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಾರದ ಹಿನ್ನೆಲೆಯಲ್ಲಿ ಚಿಂತೆಗೆ ಒಳಗಾಗಿದ್ದೀರಿ. ಇದರಿಂದ ಆರೋಗ್ಯ ಕೂಡ ಹದಗೆಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ : ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಕಾಡಲಿದೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಉದ್ಯೋಗ ಅರಸುತ್ತಿರುವವರಿಗೆ ಹೊಸ ಉದ್ಯೋಗ ಹುಡುಕಿಕೊಂಡು ಬರಲಿದೆ. ದೂರ ಪ್ರದೇಶದಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಲಾಭವಿದೆ.

ಮೀನ : ಮಕ್ಕಳು ಉತ್ತಮ ಹೆಸರು ಮಾಡಲಿ ಎಂಬ ಹಂಬಲ ನಿಮ್ಮನ್ನು ಹೆಚ್ಚಾಗಿ ಕಾಡಲಿದೆ. ಪ್ರೀತಿ – ಪ್ರೇಮದಲ್ಲಿ ಬೇಸರ ಮೂಡಲಿದೆ. ಮೋಜು ಮಸ್ತಿಯ ಕಡೆ ಮನಸ್ಸು ವಾಲಲಿದೆ. ಬಾಡಿಗೆದಾರರ ಜೊತೆ ಮನಸ್ತಾಪ ಮಾಡಿಕೊಳ್ಳುವಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...