alex Certify ಈ ರಾಶಿಯವರಿಗೆ ಇಂದು ಉದ್ಯಮದಲ್ಲಿ ಕಾದಿದೆ ಲಾಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಉದ್ಯಮದಲ್ಲಿ ಕಾದಿದೆ ಲಾಭ….!

ಮೇಷ : ಹಣ ಖರೀದಿಸಲು ಹೊಸ ಮಾರ್ಗಗಳನ್ನು ಹುಡುಕಲಿದ್ದೀರಿ. ವೈವಾಹಿಕ ಜೀವನದಲ್ಲಿ ಚಿಂತೆ ಇರಲಿದೆ. ಮಕ್ಕಳ ಓದಿಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿ ಬರಬಹುದು. ಸಾರ್ವಜನಿಕ ಸ್ಥಳದಲ್ಲಿ ಸನ್ಮಾನ ಸ್ವೀಕರಿಸಲಿದ್ದೀರಿ.

ವೃಷಭ : ಬಹಳ ದಿನಗಳ ಬಳಿಕ ಸಂಬಂಧಿಯೊಬ್ಬರು ನಿಮ್ಮ ಮನೆಗೆ ಆಗಮಿಸಲಿದ್ದಾರೆ. ಇವರ ಆಗಮನವು ನಿಮ್ಮ ವ್ಯಾಪಾರ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆ ತರಲಿದೆ. ತಂದೆಯು ನಿಮ್ಮ ಉದ್ಯಮಕ್ಕೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಮಿಥುನ : ಸಂಗಾತಿಯ ನಂಬಿಕೆ ಗಳಿಸಲು ಹೊಸ ಪ್ರಯತ್ನ ಆರಂಭಿಸಲಿದ್ದೀರಿ. ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದೀರಿ. ಚರ್ಮ ಸಂಬಂಧಿ ಕಾಯಿಲೆಯು ನಿಮ್ಮನ್ನು ಕಾಡಲಿದೆ. ಸುಬ್ರಹ್ಮಣ್ಯನನ್ನು ಧ್ಯಾನಿಸಿ.

ಕಟಕ : ವಿದ್ಯಾರ್ಥಿಗಳಿಗೆ ಗುರು ಅನುಗ್ರಹದಿಂದ ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬಸ್ಥರ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಹಾಸಿಗೆ ಹಿಡಿದಿದ್ದ ತಂದೆಯ ಆರೋಗ್ಯವು ಸುಧಾರಿಸಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಸಿಂಹ : ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಉಂಟಾಗಬಹುದು. ಕುಟುಂಬಸ್ಥರ ಸಮ್ಮುಖದಲ್ಲಿ ನಿಮಗೆ ಮುಜುಗರ ಎನ್ನಿಸುವ ಪ್ರಸಂಗವೊಂದು ನಡೆಯಲಿದೆ. ಬಹಳ ದಿನಗಳ ಬಳಿಕ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಕಂಕಣ ಭಾಗ್ಯವಿದೆ.

ಕನ್ಯಾ : ನೀವು ಅನೇಕ ವರ್ಷಗಳಿಂದ ಬಚ್ಚಿಟ್ಟಿದ್ದ ಗುಟ್ಟೊಂದು ಬಟಾ ಬಯಲಾಗುವ ದಿನಕ್ಕೆ ಇನ್ನು ಹೆಚ್ಚು ಸಮಯ ಉಳಿದಿಲ್ಲ. ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸಗಳು ಮುಂದುವರೆಯಲಿದೆ.

ತುಲಾ : ಪ್ರೇಮ ಜೀವನದಲ್ಲಿ ಸಾಕಷ್ಟು ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸ್ವಂತ ಸಾಮರ್ಥ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲಿದ್ದೀರಿ. ಹಣಕಾಸಿನ ವಿಚಾರಕ್ಕೆ ಸ್ನೇಹಿತರೊಂದಿಗೆ ಮನಸ್ತಾಪ ಕಾದಿದೆ. ಮಕ್ಕಳ ಆರೋಗ್ಯ ಸುಧಾರಿಸಲಿದೆ.

ವೃಶ್ಚಿಕ : ಮನೆ ನಿರ್ಮಾಣ ಕಾರ್ಯವು ಆಮೆ ವೇಗದಲ್ಲಿ ಸಾಗಲಿದೆ. ಇದರಿಂದ ನೀವು ಚಿಂತೆಗೆ ಒಳಗಾಗಲಿದ್ದೀರಿ. ಕೌಟುಂಬಿಕ ಜಗಳಗಳಲ್ಲಿ ನೀವು ಮೌನವನ್ನು ಕಾಯ್ದುಕೊಳ್ಳುವುದೇ ಉತ್ತಮ. ಇಲ್ಲವಾದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಧನು : ಹಳೆಯ ಸಾಲಗಳು ತೀರಲಿದೆ. ಇದರಿಂದ ಸಾಕಷ್ಟು ನಿರಾಳತೆ ಅನುಭವಿಸಲಿದ್ದೀರಿ. ಪರಿವಾರದೊಂದಿಗೆ ಪ್ರವಾಸಿ ತಾಣಗಳಿಗೆ ಪ್ರಯಾಣ ಬೆಳೆಸಲಿದ್ದೀರಿ. ಕೌಟುಂಬಿಕ ಜೀವನ ನೆಮ್ಮದಿಯಿಂದ ಇರಲಿದೆ. ವ್ಯಾಪಾರ ವ್ಯವಹಾರ ವಿಸ್ತರಿಸಲಿದ್ದೀರಿ.

ಮಕರ : ತಂದೆಯ ನಡವಳಿಕೆಯಿಂದಾಗಿ ನಿಮಗೆ ಸಾರ್ವಜನಿಕ ಜೀವನದಲ್ಲಿ ಮುಜುಗರ ಎನ್ನಿಸುವ ಪ್ರಸಂಗ ನಡೆಯಬಹುದು. ಸ್ತ್ರೀಯರಿಗೆ ಇಂದು ಧನಲಾಭವಿದೆ. ಆರ್ಥಿಕ ಸ್ಥಿತಿಯಲ್ಲಿ ಅಂತಹ ಯಾವುದೇ ಸುಧಾರಣೆ ಕಂಡು ಬರೋದಿಲ್ಲ.

ಕುಂಭ : ವೃತ್ತಿ ಜೀವನಕ್ಕೆ ಮಹತ್ವ ನೀಡಲು ಹೋಗಿ ಸಂಸಾರವನ್ನು ಕಡೆಗಣಿಸುತ್ತಿದ್ದೀರಿ. ಇದರಿಂದ ನಿಮ್ಮ ಸಂಗಾತಿಗೆ ನೋವುಂಟಾಗಲಿದೆ. ಕಚೇರಿಯಲ್ಲಿ ಕಡಿಮೆ ದರ್ಜೆಯ ಕೆಲಸಗಾರರೊಂದಿಗೆ ದರ್ಪ ಬೇಡ. ಮಹತ್ವದ ಅಧಿಕಾರವೊಂದು ನಿಮಗೆ ಸಿಗಲಿದೆ.

ಮೀನ : ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡಲಿದ್ದೀರಿ. ಅಂದುಕೊಂಡ ಕಾರ್ಯಗಳನ್ನು ನಡೆಸಲಿದ್ದೀರಿ. ಕೌಟುಂಬಿಕವಾಗಿ ಅಂತಹ ನೆಮ್ಮದಿಯೇನು ಇಲ್ಲ. ವ್ಯವಹಾರ ಚತುರತೆಯಿಂದ ಲಾಭ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಜಾಗ್ರತೆ ಇರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...