alex Certify ಈ ರಾಶಿಯವರಿಗೆ ಇಂದು ಉತ್ತಮವಾಗಿರಲಿದೆ ಹಣಕಾಸಿನ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಉತ್ತಮವಾಗಿರಲಿದೆ ಹಣಕಾಸಿನ ಸ್ಥಿತಿ

ಮೇಷ : ವ್ಯಾಪಾರ – ವ್ಯವಹಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೊಂಚ ಕಿರಿಕಿರಿ, ಗದ್ದಲಗಳು ಉಂಟಾಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಹಿಡಿದ ಕಾರ್ಯ ನಿಧಾನವಾರದೂ ಸರಿ ಕೈಗೂಡಲಿದೆ.

ವೃಷಭ : ಸಂವಹನ ಕೊರತೆಯಿಂದಾಗಿ ಕಚೇರಿ ಕೆಲಸದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಯಾವುದೇ ಕಾರಣಕ್ಕೂ ಸಾಲದ ವ್ಯವಹಾರಗಳಿಗೆ ಕೈ ಹಾಕಬೇಡಿ. ಆಪ್ತರು ಎಂದ ಮಾತ್ರಕ್ಕೆ ಅವರು ಹೇಳಿರೋದೆಲ್ಲ ಸರಿ ಎಂಬ ಭಾವನೆ ಬಿಡಿ.

ಮಿಥುನ : ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಗರ್ಭಿಣಿಯರು ಹಾಗೂ ವೃದ್ಧರು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಿ. ಬೆನ್ನು ನೋವಿನ ಸಮಸ್ಯೆ ಭಾದಿಸುವ ಸಾಧ್ಯತೆ ಇದೆ.

ಕಟಕ : ವ್ಯವಹಾರಗಳಲ್ಲಿ ಕ್ರಮೇಣವಾಗಿ ಮುನ್ನಡೆ ಸಾಧಿಸಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಸಂಗಾತಿಯಿಂದ ಉತ್ತಮ ಸಲಹೆಗಳನ್ನ ನಿರೀಕ್ಷಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇದೆ.

ಸಿಂಹ : ಜವಳಿ ಉದ್ಯಮಿಗಳಿಗೆ, ಹಣ್ಣಿನ ವ್ಯಾಪಾರಿಗಳಿಗೆ ಇಂದು ಶುಭ ದಿನ, ಸರ್ಕಾರಿ ನೌಕರರಿಗೆ ಇಂದು ನೆಮ್ಮದಿ ಇದೆ. ಮನೆಯಲ್ಲಿ ಶುಭ ಕಾರ್ಯದ ಮುನ್ಸೂಚನೆ ಸಿಗಲಿದೆ. ಕುಲದೇವತೆಯನ್ನ ಆರಾಧಿಸಿ.

ಕನ್ಯಾ : ಮದುವೆ ಸಂಬಂಧಕ್ಕಾಗಿ ಹುಡುಕಾಡುತ್ತಿರುವವರಿಗೆ ಇಂದು ಸಂಬಂಧವೊಂದು ಕೂಡಿ ಬರಲಿದೆ. ನವದಂಪತಿಗೆ ಸಂತಾನ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ದಿನವಾಗಿದೆ.

ತುಲಾ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಅನಾರೋಗ್ಯ ಕಾರಣದಿಂದಾಗಿ ಕೆಲಸ ಕಾರ್ಯದ ಮೇಲಿನ ಏಕಾಗ್ರತೆಗೆ ಭಂಗ ಉಂಟಾಗಲಿದೆ. ಹಳೆಯ ಸಾಲಗಳು ತೀರೋದ್ರಿಂದ ನೀವಿಂದು ಸಂತಸವಾಗಿ ಇರಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ಭಾದಿಸುವ ಸಾಧ್ಯತೆ ಇದೆ.

ವೃಶ್ಚಿಕ : ಸಂತಾನ ಭಾಗ್ಯವಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಇಂದು ಶುಭ ಸುದ್ದಿಯನ್ನ ಕೇಳಲಿದ್ದೀರಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ.

ಧನು : ನಾನು ಮಾಡಿದ್ದೇ ಸರಿ ಎಂಬ ಮನೋಭಾವನೆಯನ್ನ ಪಕ್ಕಕಿಡಿ. ಅಹಂಕಾರವನ್ನ ದೂರ ಮಾಡಿಕೊಂಡಷ್ಟೂ ನಿಮಗೆ ಒಳ್ಳೆಯದು. ವಿದ್ಯಾರ್ಥಿಗಳ ಕಠಿಣ ಪ್ರರಿಶ್ರಮಕ್ಕೆ ಫಲ ಸಿಗಲಿದೆ. ಆಂಜನೇಯನನ್ನ ಆರಾಧಿಸಿ.

ಮಕರ : ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಕಷ್ಟಪಟ್ಟು ಮಾತನಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ತಾಳ್ಮೆ ಕಳೆದುಕೊಳ್ಳಬೇಡಿ. ಅಪ್ರಾಮಾಣಿಕರಿಂದ ಅಂತರ ಕಾಯ್ದುಕೊಳ್ಳಿ. ದೇವತಾನುಗ್ರಹವಿದೆ.

ಕುಂಭ : ಇಂದು ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತೀರಾ. ಕುಲದೇವರ ಸ್ಮರಣೆ ಮಾಡಿ. ಸಹೋದ್ಯೋಗಿಗಳು ನಿಮ್ಮ ಮೇಲೆ ಹಗೆ ಸಾಧಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಒಳಿತಾಗಲಿದೆ.

ಮೀನ : ಸಾಲ ಪಡೆಯುವ ಅಥವಾ ಸಾಲ ನೀಡುವ ಕೆಲಸಕ್ಕೆ ಕೈ ಹಾಕಲೇಬೇಡಿ. ಮಕ್ಕಳ ಬಗ್ಗೆ ಅತಿಯಾದ ಅಸಡ್ಡೆ ಕೂಡ ಒಳ್ಳೆಯದಲ್ಲ. ಮಕ್ಕಳಿಗೂ ಆದ್ಯತೆಯನ್ನ ನೀಡಿ. ಕಚೇರಿ ಕೆಲಸಗಳಲ್ಲಿ ನೆಮ್ಮದಿ. ಅನಿರೀಕ್ಷಿತ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...