alex Certify ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ

 

ಮೇಷ : ಉದ್ಯಮದಲ್ಲಿ ಲಾಭವಿದೆ. ಆದರೆ ಹೊಸ ಹೂಡಿಕೆಗಳಿಗೆ ಇದು ಶುಭ ದಿನವಲ್ಲ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯವಾಗಲಿದೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ವೃಷಭ : ನೀವೆಂದುಕೊಂಡ ಸಮಯಕ್ಕೆ ಆಗಬೇಕಾದ ಕೆಲಸ ಪೂರ್ಣಗೊಳ್ಳದೇ ಇರೋದು ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ. ಆದರೆ ನಿಧಾನವಾಗಿ ಯಶಸ್ಸನ್ನು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಕಂಡು ಬರಲಿದೆ. ವ್ಯಾಪಾರ – ವ್ಯವಹಾರ ಮಂದಗತಿಯಲ್ಲಿ ಸಾಗಲಿದೆ.

ಮಿಥುನ : ವ್ಯಾಪಾರಿಗಳ ಪಾಲಿಗೆ ಇದು ಮಧ್ಯಮಫಲ ನೀಡುವ ದಿನವಾಗಿದೆ. ಶತ್ರುದೋಷದಿಂದ ಕಾಟ ಅನುಭವಿಸಲಿದ್ದೀರಿ. ಅಗ್ನಿ, ಜಲದಿಂದ ಕೊಂಚ ಅಂತರ ಕಾಯ್ದುಕೊಳ್ಳಿ. ಕುಟುಂಬದಲ್ಲಿ ಸಂತಸದ ವಾತಾವರಣ ನೆಲಸಲಿದೆ.

ಕಟಕ : ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣಲಿದ್ದೀರಿ. ಆದರೆ ಕಚೇರಿ ಕೆಲಸದಲ್ಲಿ ಮೇಲಾಧಿಕಾರಿಗಳ ಕಿರಿಕಿರಿ ಮಾತ್ರ ತಪ್ಪಿದ್ದಲ್ಲ. ಗೃಹ ನಿರ್ಮಾಣ ಕೆಲಸಕ್ಕೆ ಕೈ ಹಾಕಲಿದ್ದೀರಿ. ಕುಲದೇವತೆಯನ್ನು ಆರಾಧಿಸಿ.

ಸಿಂಹ : ನಿಮ್ಮ ಅತಿಯಾದ ಕೋಪದಿಂದ ಕುಟುಂಬದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕದ ಹೊರತು ಆರ್ಥಿಕ ಲಾಭವಿಲ್ಲ. ಮನೆಯಲ್ಲಿ ಶೀಘ್ರದಲ್ಲೇ ಶುಭಕಾರ್ಯ ನಡೆಯಲಿದೆ. ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ.

ಕನ್ಯಾ : ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಅನಗತ್ಯ ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಕಚೇರಿ ಕೆಲಸದ ಪ್ರಯುಕ್ತ ಅನಿವಾರ್ಯವಾಗಿ ವ್ಯರ್ಥ ತಿರುಗಾಟ ಮಾಡಬೇಕಾಗಿ ಬರಬಹುದು. ಹಿರಿಯರ ಆರೋಗ್ಯದ ಮೇಲೆ ಕಾಳಜಿ ಇರಲಿ.

ತುಲಾ : ನಿಮ್ಮ ಅತಿಯಾದ ಜಿಪುಣತನ ಸಂಗಾತಿಯ ಕೋಪಕ್ಕೆ ಕಾರಣವಾಗಬಹುದು. ಆಸ್ತಿ ವಿಚಾರಕ್ಕೆ ದಾಯಾದಿ ಕಲಹ ನಡೆಯಲಿದೆ. ಒತ್ತಡದ ದಿನಗಳಲ್ಲಿ ಸ್ನೇಹಿತರ ಸಹಾಯಹಸ್ತ ಸಿಗಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ವೃಶ್ಚಿಕ : ಸಹೋದ್ಯೋಗಿಗಳಿಂದ ಅಸಮಾಧಾನಕ್ಕೆ ಒಳಗಾಗುವಿರಿ. ಇದರ ಪರಿಣಾಮ ನಿಮ್ಮ ಕೆಲಸದಲ್ಲೂ ಕಾಣಲಿದೆ. ಸಂಗಾತಿಯಿಂದ ಕೆಲವು ಉತ್ತಮ ಸಲಹೆಗಳನ್ನು ಸ್ವೀಕರಿಸಲಿದ್ದೀರಿ. ಪೋಷಕರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಧನು : ಕಚೇರಿ ಕೆಲಸದಲ್ಲಿ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಉದ್ಯಮದಲ್ಲಿ ನೀವೆಂದುಕೊಂಡ ಲಾಭ ಸಿಗದೇ ಮಾನಸಿಕವಾಗಿ ನೋವನ್ನು ಅನುಭವಿಸಲಿದ್ದೀರಿ. ಹೊಸ ಉದ್ಯಮಕ್ಕೆ ಕೈ ಹಾಕುವ ಮುನ್ನ ಪರಿಣಿತರಿಂದ ಸಲಹೆ ಪಡೆದುಕೊಳ್ಳಿ.

ಮಕರ : ವಿದ್ಯಾರ್ಥಿಗಳ ಪಾಲಿಗೆ ಇದು ಅತ್ಯಂತ ಶುಭ ದಿನ. ರಾಜಕೀಯ ರಂಗದವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ದೊರಕಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ಕೊಟ್ಟ ಸಾಲದ ಮೊತ್ತ ನಿಮ್ಮ ಕೈ ಸೇರಲಿದೆ.

ಕುಂಭ : ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಮಾತನ್ನು ನೆನಪಿನಲ್ಲಿಡಿ. ಅತಿಯಾದ ಖರ್ಚು ಒಳ್ಳೆಯದಲ್ಲ. ಸಂಗಾತಿಯ ಅನಾರೋಗ್ಯ ನಿಮ್ಮ ಇಂದಿನ ನೆಮ್ಮದಿಯನ್ನು ಹಾಳು ಮಾಡಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಸಾದ್ಯತೆ.

ಮೀನ : ವ್ಯಾಪಾರ – ವ್ಯವಹಾರದಲ್ಲಿ ನಷ್ಟ ತಲೆದೋರಲಿದೆ. ಅಗ್ನಿ ಹಾಗೂ ವಿದ್ಯುತ್​ನಿಂದ ಗಂಡಾಂತರವಿದೆ. ಚಿಕ್ಕ ಚಿಕ್ಕ ವಿಷಯಕ್ಕೆ ಅನಗತ್ಯ ಸಿಟ್ಟು ಒಳ್ಳೆಯದಲ್ಲ. ಮಕ್ಕಳ ಭವಿಷ್ಯದ ಚಿಂತೆ ನಿಮ್ಮನ್ನು ಕಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...