alex Certify ಈ ರಾಶಿಯವರಿಗಿದೆ ಇಂದು ಎಲ್ಲಾ ಕಾರ್ಯದಲ್ಲಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಎಲ್ಲಾ ಕಾರ್ಯದಲ್ಲಿ ಜಯ

ಮೇಷ : ಕುಟುಂಬದಲ್ಲಿನ ಎಲ್ಲಾ ಕಲಹಗಳು ಶಮನವಾಗಲಿದೆ. ಇದರಿಂದ ನೀವು ಸಮಾಧಾನಗೊಳ್ಳುವಿರಿ. ಎಲ್ಲಾ ಪರಿಸ್ಥಿತಿಯಲ್ಲಿ ಶಾಂತ ರೀತಿಯಲ್ಲೇ ಇರುವ ನಿಮ್ಮ ಸ್ವಭಾವವು ಬೇರೆಯವರಿಗೆ ಇದು ಜಾರಿಕೊಳ್ಳುವ ಬುದ್ಧಿ ಎಂದೆನಿಸಬಹುದು.

ವೃಷಭ : ವ್ಯಾಪಾರದಲ್ಲಿ ಲಾಭವೂ ಇಲ್ಲ ಹಾನಿಯೂ ಇಲ್ಲದ ಸ್ಥಿತಿ ಇರಲಿದೆ. ಹಣಕಾಸಿನ ವಿಚಾರದಲ್ಲಿ ಸೋದರರ ಜೊತೆ ಕಲಹ ಉಂಟಾಗಬಹುದು. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ.

ಮಿಥುನ : ಕಚೇರಿ ಕೆಲಸದ ವಿಚಾರದಲ್ಲಿ ಪೂರ್ವ ತಯಾರಿ ಇಲ್ಲದೆಯೇ ಹೋದಲ್ಲಿ ಯಶಸ್ಸು ನಿಮ್ಮದಾಗಲು ಸಾಧ್ಯವೇ ಇಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಪೋಷಕರ ಜೊತೆ ಅನಗತ್ಯ ವಾದಕ್ಕೆ ಇಳಿಯಲಿದ್ದೀರಿ. ಇದರಿಂದ ಮನೆಯ ಶಾಂತಿ ಕದಡಿ ಹೋಗಲಿದೆ.

ಕಟಕ : ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಇದು ಮನೆಯವರ ಚಿಂತೆಗೆ ಕಾರಣವಾಗಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಮನೆಯ ಕಿರಿಯ ಸದಸ್ಯರಿಂದ ಶುಭಸುದ್ದಿ ಕೇಳುವಿರಿ. ವ್ಯಾಪಾರ – ವ್ಯವಹಾರದ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದಷ್ಟೂ ಒಳ್ಳೆಯದು.

ಸಿಂಹ : ನಿಮ್ಮ ಜೊತೆ ಚೆನ್ನಾಗಿಯೇ ಇದ್ದು ಬೆನ್ನ ಹಿಂದೆ ಚೂರಿ ಹಾಕುವವರ ಜೊತೆ ಎಚ್ಚರಿಕೆಯಿಂದ ಇರಿ. ಇಲ್ಲವಾದಲ್ಲಿ ದೊಡ್ಡ ಕಂದಕಕ್ಕೆ ಬೀಳುವ ಸಾಧ್ಯತೆ ಇದೆ, ಇಂದು ನಿಮಗೆ ವಾಹನ ಪ್ರಯಾಣ ಶುಭಕರವಲ್ಲ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ.

ಕನ್ಯಾ : ಜನರೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ಶಕ್ತರಾಗುವಿರಿ. ಅಂದುಕೊಂಡ ಕಾರ್ಯವನ್ನು ಯುಕ್ತಿಯಿಂದ ಸಾಧಿಸುತ್ತೀರಿ. ಆದರೆ ಯಾವುದೇ ಕಾರಣಕ್ಕೂ ಆತುರ ನಿರ್ಧಾರ ಕೈಗೊಳ್ಳಬೇಡಿ. ಸಂಗಾತಿಯೊಡನೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ತುಲಾ : ಹಲವು ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಇಂದು ಚಾಲನೆ ಪಡೆದುಕೊಳ್ಳಲಿದೆ. ನಿಮ್ಮ ಜೀವನದ ಎಲ್ಲಾ ಕಷ್ಟಗಳೂ ನಾಶವಾಗುವ ದಿನಗಳು ಹೆಚ್ಚು ದೂರ ಉಳಿದಿಲ್ಲ. ಮಕ್ಕಳು ಓದಿನಲ್ಲಿ ಹಿನ್ನಡೆ ಎದುರಿಸಲಿದ್ದಾರೆ. ಇದರಿಂದ ನೀವು ಆತಂಕಕ್ಕೆ ಒಳಗಾಗುವಿರಿ.

ವೃಶ್ಚಿಕ : ಸ್ನೇಹಿತರ ಜೊತೆ ಮನಸ್ತಾಪ ಉಂಟಾಗಲಿದೆ. ಆದರೆ ಪರಸ್ಪರ ಆರೋಪಗಳನ್ನು ಹೊರಿಸುವ ಬದಲು ತಾಳ್ಮೆಯಿಂದ ಪರಿಸ್ಥಿತಿ ಅವಲೋಕನ ಮಾಡಿದಲ್ಲಿ ಸಂಬಂಧ ಹಸನಾಗಿ ಇರಲಿದೆ. ಉದ್ಯಮದಲ್ಲಿ ಸ್ಥಿರತೆ ಇರಲಿದೆ. ಯಾವುದೇ ಕಾರಣಕ್ಕೂ ದೊಡ್ಡ ಮಟ್ಟದ ಹೂಡಿಕೆ ಮಾಡಬೇಡಿ.

ಧನು : ಹೊಸ ವ್ಯವಹಾರಗಳಿಗೆ ಹಣ ಹೂಡಿಕೆ ಮಾಡುವ ಮುನ್ನ ವಿಚಾರ ಮಾಡಿ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯವಿದೆ. ಅಡ್ಡದಾರಿಯಲ್ಲಿ ಹಣ ಸಂಪಾದನೆ ಮಾಡಲು ಹೋಗಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ನೀವೇ ಮೋಸ ಹೋಗುವ ಸಾಧ್ಯತೆ ಇದೆ.

ಮಕರ : ಕಷ್ಟಕಾಲದಲ್ಲಿ ಸ್ನೇಹಿತರ ನಿಜ ಬಣ್ಣ ತಿಳಿಯಲಿದೆ. ನಿಮ್ಮವರು ಎಂದುಕೊಂಡವರೇ ನಿಮಗೆ ಕೈ ಕೊಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ. ವ್ಯಾಪಾರ ವ್ಯವಹಾರದಲ್ಲಿ ಮಂದಗತಿಯ ಲಾಭವಿದೆ.

ಕುಂಭ : ಉದ್ಯಮದಲ್ಲಿ ಜಾಗರೂಕರಾಗಿ ಇರಬೇಕಾದ ಅವಶ್ಯಕತೆ ಇದೆ. ನಿಮ್ಮ ಅತಿಯಾದ ಕೋಪವು ದಾಂಪತ್ಯ ಜೀವನದಲ್ಲಿ ವಿರಸ ಮೂಡಿಸಬಹುದು. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಇದರಿಂದ ಸಾರ್ವಜನಿಕ ಜೀವನದಲ್ಲಿ ನಿಮ್ಮ ಮೌಲ್ಯವೂ ಹೆಚ್ಚಲಿದೆ.

ಮೀನ : ಅಂದುಕೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಆಸ್ತಿ ಖರೀದಿ ಮಾಡುವ ಯೋಗವಿದೆ. ಮೊದಲು ಕಷ್ಟವಿದ್ದರೂ ನಂತರದಲ್ಲಿ ಸುಖವಿದೆ. ಮಾತು ಕೇಳದ ಜನರಿಂದ ನೀವೇ ಅಂತರ ಕಾಯ್ದುಕೊಳ್ಳಿ. ಸಂಗಾತಿಯಿಂದ ದುಬಾರಿ ಬೆಲೆಯ ಉಡುಗೊರೆಯನ್ನು ಪಡೆಯಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...