alex Certify ಈ ರಾಶಿಯವರಿಗಿದೆ ಇಂದು ಉದ್ಯೋಗ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಉದ್ಯೋಗ ಅವಕಾಶ

 

ಮೇಷ : ಇಂದು ನೀವು ಹಿರಿಯರ ಸಹಾಯವನ್ನು ಅಪೇಕ್ಷೆ ಪಡಲಿದ್ದೀರಿ. ಆತ್ಮೀಯ ಜನಗಳೇ ನಿಮ್ಮನ್ನು ಮೋಸದ ಜಾಲಗಳಿಗೆ ಸಿಲುಕಿಸಬಹುದುದಾಗಿದೆ ಎಚ್ಚರಿಕೆ ವಹಿಸಿ. ನಿಮ್ಮ ಕ್ರಿಯಾತ್ಮಕ ಚಟುವಟಿಕೆ, ಜೀವನ ಶೈಲಿ ಹಾಗೂ ಬುದ್ಧಿ ಮಟ್ಟತೆ ಎಲ್ಲವೂ ಗ್ರಹಣ ಹಿಡಿದಂತೆ ಮಂಕಾಗಿದೆ.

ನೀವು ವ್ಯಾಯಾಮ, ದೈಹಿಕ ಕಸರತ್ತು ಓಟಗಳಲ್ಲಿ ಪಾಲ್ಗೊಳ್ಳುವುದು ಇಂತಹ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಚೈತನ್ಯ ವೃದ್ಧಿಯಾಗುವುದು. ನಿಮ್ಮ ಮನಸ್ಸಿನಲ್ಲಿ ಮೂಡುವ ಕೆಲವೊಂದು ವಿಚಾರಗಳನ್ನು ಆದಷ್ಟು ಹತೋಟಿಯಲ್ಲಿರಲಿ. ದಾಂಪತ್ಯ ಅನ್ಯೋನ್ಯತೆಗೆ ನಿಮ್ಮಿಂದ ಮೊದಲು ಆದ್ಯತೆ ಸಿಗಲಿ.

ವೃಷಭ : ಗೃಹ ಚಟುವಟಿಕೆಯು ವೇಗ ಪಡೆಯಲಿದೆ. ಮನೆ ಕಟ್ಟುವವರಿಗೆ ಉತ್ತಮ ವಾತಾವರಣ. ಮನೆಗೆ ಬೇಕು-ಬೇಡಗಳ ಪೂರೈಸುವ ಶಕ್ತಿಯು ನಿಮ್ಮಲ್ಲಿ ಇದೆ. ಆರ್ಥಿಕ ರಂಗದಲ್ಲಿ ವ್ಯವಸ್ಥಿತ ಲಾಭ ಗಳಿಕೆ. ನಿಮ್ಮ ಕೆಲವು ಕಾರ್ಯಗಳು ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ.

ನೀವು ಇಂದು ಉತ್ಸಾಹಭರಿತರಾಗಿರುವಿರಿ. ಸಂಗಾತಿಯ ಸೂಕ್ಷ್ಮ ನೋಟ ಹಾಗೂ ಪ್ರೀತಿಯ ಮಾತು ನಿಮ್ಮಲ್ಲಿ ಸಂಚಲನ ಮೂಡಿಸುವುದು. ನಿಮ್ಮ ಯೋಜನೆಗೆ ಬೆಂಬಲವಾಗಿ ನಿಲ್ಲುವರು.

ಮಿಥುನ : ಸಹೋದರ ವರ್ಗದಿಂದ ಸಮಸ್ಯೆಗಳು ಬರಬಹುದು. ಕುಟುಂಬ ಹಿತ ಕಾಪಾಡಲು ಸೂಕ್ತವಾಗಿ ಯೋಚಿಸಿ. ಹಣಕಾಸಿನ ವಿಷಯಗಳಲ್ಲಿ ನೀವು ಅಂದುಕೊಂಡ ಯೋಜನೆಯ ಲಾಭವನ್ನು ಪಡೆಯುವಿರಿ. ನಿಮ್ಮ ಇಷ್ಟದ ಪ್ರಕಾರ ಕೆಲಸದಲ್ಲಿ ವಾತಾವರಣವಿದೆ.

ಕಟಕ : ವ್ಯಾಪಾರ ವ್ಯವಹಾರ ಸುಲಲಿತವಾಗಿ ನಡೆಯುತ್ತದೆ. ನಿಮ್ಮ ಮನೆಯಲ್ಲಿನ ಹಿರಿಯರ ಮಾತನ್ನು ನಡೆಸಿಕೊಡುವ ವಿಚಾರಗಳಲ್ಲಿ ಕಾರ್ಯಪ್ರವೃತ್ತರಾಗಿರಿ. ಕ್ರೀಡಾಸಕ್ತರಿಗೆ ಉತ್ತಮವಾದ ದಿನ. ವೃತ್ತಿರಂಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತದೆ.

ನಿಮ್ಮ ಕೆಲವು ಕನಸುಗಳು ಆಗಿರಬಹುದು ಅಥವಾ ಯೋಜನೆಗಳು ಆಗಿರಬಹುದು ನಿಮ್ಮ ಸ್ನೇಹಿತರೊಡನೆ ಮುಕ್ತವಾಗಿ ಹಂಚಿಕೊಳ್ಳುವುದರಿಂದ ಅವುಗಳು ಬೇಗನೆ ನನಸಾಗುವ ಸಂದರ್ಭ ಇದೆ.

ಸಿಂಹ : ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕದೆ ಹಾಗೆಯೇ ದೂರದಿಂದ ಅವರ ಸ್ವಭಾವವನ್ನು ಗಮನಿಸಿ. ಯಾವಾಗಲೂ ಹಣ ಗಳಿಕೆ ಎಂಬುದೇ ನಿಮ್ಮ ಮನಸ್ಸಿನಲ್ಲಿದ್ದರೆ ನಿಮ್ಮ ವೈವಾಹಿಕ ಜೀವನಕ್ಕೂ ಸ್ವಲ್ಪ ಸಮಯ ನೀಡಿದರೆ ಒಳ್ಳೆಯದು.

ಕನ್ಯಾ : ವಾಣಿಜ್ಯ ಬೆಳೆಗಳ ಕ್ರಯ ವಿಕ್ರಯಕ್ಕೆ ಲಾಭಕಾರಿ ದಿನವಾಗಿದೆ. ಅತಿ ದೊಡ್ಡ ಮೊತ್ತ ಕೈ ಸೇರುವ ಸಂಭವ ಇದೆ. ಕುಟುಂಬದಲ್ಲಿ ಹೊಸದಾದ ವಿಚಾರಗಳಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಹಾಗೂ ಸಂಭ್ರಮಿಸುವ ವಾತಾವರಣ ಸೃಷ್ಟಿಯಾಗಲಿದೆ. ಹಿರಿಯರ ಆರೋಗ್ಯ ಚೇತರಿಕೆ ಆಗುತ್ತದೆ. ಉದಯೋನ್ಮುಖ ಉದ್ದಿಮೆದಾರರಿಗೆ ಉತ್ತಮವಾದ ದಿನ, ಮುಟ್ಟಿದ್ದೆಲ್ಲವೂ ಒಳ್ಳೆಯ ಫಲಿತಾಂಶ ನೀಡಬಹುದು.

ಆರ್ಥಿಕ ವ್ಯವಹಾರ ನಡೆಸುವಾಗ ಶಿಸ್ತಿನಿಂದ ಮಾತನಾಡುವುದನ್ನು ರೂಢಿಸಿಕೊಳ್ಳಿ. ನಿಮ್ಮ ಪತ್ನಿಯ ವಿಶೇಷ ಕಾಳಜಿ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿಸುತ್ತವೆ. ಮಕ್ಕಳ ತುಂಟಾಟ ಆನಂದ ತರಿಸುತ್ತದೆ.

ತುಲಾ :ಅನಗತ್ಯವಾಗಿ ಮಾತನಾಡಿ ಕೆಲವು ಗುಟ್ಟುಗಳನ್ನು ರಟ್ಟು ಮಾಡಬೇಡಿ. ನಿಮ್ಮ ಆತ್ಮ ಬಲವನ್ನು ನಂಬಿ ಕೆಲಸಕ್ಕೆ ಧುಮುಕುವುದು ಉತ್ತಮ ಫಲಿತಾಂಶ ನೀಡುತ್ತದೆ. ಗೃಹ ಶಾಂತಿ ನೆಲೆಸಲು ನಿಮ್ಮಿಂದ ಆದಷ್ಟು ಪ್ರಯತ್ನಗಳನ್ನು ಮಾಡಿ.

ವೃಶ್ಚಿಕ : ಕೆಲಸದ ಒತ್ತಡ ಹೆಚ್ಚಿದ್ದರೂ ವಿಶ್ರಾಂತಿ ಅಗತ್ಯವಾಗಿ ಸಿಗುತ್ತದೆ. ತಾಂತ್ರಿಕ ವರ್ಗದವರಿಗೆ ಹೆಚ್ಚಿನ ಕೆಲಸ ಹಾಗೂ ಆದಾಯ ಹೆಚ್ಚಾಗುತ್ತದೆ. ಮಕ್ಕಳಿಗೆ ಜ್ಞಾನ ವಿಕಸನ ಹೊಂದಲು ಕೆಲವು ವಸ್ತುಗಳ ಖರೀದಿ ಸಾಧ್ಯತೆ. ನಿಮ್ಮ ವೈವಾಹಿಕ ಜೀವನದಲ್ಲಿ ಅದ್ಭುತ ಮತ್ತು ನೆನಪಿಡುವ ಪ್ರಸಂಗಗಳು ಇರುತ್ತದೆ.

ವಾಹನ ಸವಾರಿಯಲ್ಲಿ ಆಲಸ್ಯತನ ತೋರಬೇಡಿ. ಮಕ್ಕಳ ಉದ್ಯೋಗಕ್ಕಾಗಿ ನೀವೇ ಕೆಲವು ಯೋಜನೆಗಳನ್ನು ರೂಪಿಸಿ ಅವರಿಗೆ ಉದ್ಯೋಗ ಅವಕಾಶ ದೊರಕಿಸಿ ಕೊಡುತ್ತೀರಿ. ಶುಭ ಗ್ರಹದ ದೃಷ್ಟಿಯಿಂದ ಅನಿರೀಕ್ಷಿತ ಹಾಗೂ ನಿರೀಕ್ಷಿತ ಲಾಭಗಳು ಇದೆ.

ಧನು: ನಿಮ್ಮ ಆತ್ಮ ಬಲದಿಂದ ಯೋಜಿತ ಕಾರ್ಯಗಳಲ್ಲಿ ವಿಜಯ ಪ್ರಾಪ್ತಿಯಾಗುವುದು. ನಿಮ್ಮ ಬಹು ದಿನದ ಕನಸು ಶೀಘ್ರದಲ್ಲಿಯೇ ನನಸಾಗುವ ಕ್ಷಣಗಣನೆ. ನೀವು ನಡೆಯುವ ದಾರಿಯಲ್ಲಿ ಬೆಂಬಲವಾಗಿ ಗುರು-ಹಿರಿಯರು ನಿಂತಿರುವರು. ಸೂಕ್ಷ್ಮ ವಿಚಾರಗಳನ್ನು ಚರ್ಚಿಸುವಾಗ ಪ್ರಬುದ್ಧತೆಯಿಂದ ವರ್ತಿಸಿ.

ಹಳೆಯ ಬಾಕಿ ಸಾಲ ವಾಪಸ್ಸು ಬರುವ ಸಾಧ್ಯತೆಗಳು ದಟ್ಟವಾಗಿದೆ. ನಿಮ್ಮಲ್ಲಿನ ಕೆಲವು ವಿಷಯಗಳಲ್ಲಿನ ಅನುಮಾನ ಎಂಬ ಪರದೆಯನ್ನು ಸರಿಸಿ ನೋಡುವುದು ಸೂಕ್ತವಾಗಿದೆ. ನಿಮ್ಮ ದೃಷ್ಟಿಗೆ ಮಂಕು ಕವಿದಿದೆ ಆದಷ್ಟು ಸರಿಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು.

ಮಕರ : ಕೆಲಸದಲ್ಲಿ ನಿಮ್ಮ ವ್ಯವಸ್ಥಿತ ವಿಚಾರಗಳನ್ನು ಯಾವುದೇ ತರ್ಕ ರಹಿತವಾಗಿ ಎಲ್ಲರೂ ಒಮ್ಮತದ ಒಪ್ಪಿಗೆ ಸೂಚಿಸುವರು. ಇದರಿಂದ ಉದ್ಯೋಗ ಸ್ಥಳದಲ್ಲಿ ಹೆಚ್ಚು ಪ್ರಶಂಸೆ ಗಳಿಸುವಿರಿ. ನಿಮಗೆ ಸಿಗುವ ಅವಕಾಶ ಶ್ರದ್ಧೆಯಿಂದ ಪಾಲಿಸಿ.

ನಿಮ್ಮ ಜವಾಬ್ದಾರಿಯಿಂದ ತೆಗೆದುಕೊಂಡ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ. ನಿಮ್ಮ ಬೆಳವಣಿಗೆ ಸಹಿಸದ ಬಂಧು – ವರ್ಗಗಳು ನಿಮ್ಮ ಜೊತೆಯಲ್ಲಿ ಇರುವರು ಆದಷ್ಟು ನಯವಾಗಿ ಮಾತನಾಡಿ ಮುಂದೆ ಕಳುಹಿಸುವುದು ಕ್ಷೇಮ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ವಹಿಸಿ.

ಕುಂಭ : ನೀವು ಕೆಲಸದಲ್ಲಿ ಸೋತರು ಪ್ರಯತ್ನವನ್ನು ಬಿಡಬೇಡಿ. ಗುರಿಯು ಅಷ್ಟು ಸುಲಭವಲ್ಲ, ದಾರಿ ತಪ್ಪಿಸುವವರಿಂದ ದೂರವಿರಿ. ನೀವು ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಾಮರ್ಶಿಸಿ ಆತ್ಮೀಯರೊಡನೆ ಚರ್ಚಿಸಿ ನಂತರ ನಿರ್ಣಯ ತಿಳಿಸಿ.

ಕೆಲವು ಜನ ನೀಡುವ ಭರವಸೆಯನ್ನು ನಂಬಿ ಮೋಸ ಹೋಗುವ ಪ್ರಸಂಗ ಬರಬಹುದು. ಯಾರು ದಿಢೀರನೆ ಶ್ರೀಮಂತರಾಗುವುದಿಲ್ಲ. ಕಷ್ಟ ಪಟ್ಟರೆ ಮಾತ್ರ ಶ್ರೀಮಂತಿಕೆ ಸಿದ್ಧಿಯಾಗುವುದು. ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಇರಬೇಡಿ.

ಮೀನ : ಬರುವ ಕಷ್ಟಗಳನ್ನು ಎದುರಿಸುವ ಛಲವು ನಿಮ್ಮಲ್ಲಿ ಕರಗತವಾಗಿದೆ. ಹಣಕಾಸಿನ ವಿಷಯದಲ್ಲಿ ನಿಮ್ಮ ಯೋಜನೆಗಳ ವಿಸ್ತರಣೆಗೆ ಆದ್ಯತೆ ನೀಡುವಿರಿ. ನಿಮ್ಮ ಪ್ರಾಮಾಣಿಕತೆಯನ್ನು ಯಾರು ಪ್ರಶ್ನಿಸಲಾಗದು. ಇಲ್ಲಸಲ್ಲದ ವಿಚಾರಗಳನ್ನು ನಿಮ್ಮ ಮುಂದೆ ಇಟ್ಟು ಮಾನಸಿಕ ತೊಂದರೆ ನೀಡುವಂತಹ ಜನಗಳಿಂದ ಆದಷ್ಟು ದೂರವಿರಿ. ಇಂದು ನಿಮ್ಮಲ್ಲಿ ಹೊಸ ಬಯಕೆಗಳು ಮೂಡುತ್ತದೆ.

ಈಗ ಮಾಡುತ್ತಿರುವ ಕೆಲಸ ಜೊತೆಯಲ್ಲಿ ಉಪ ಕಸುಬುಗಳನ್ನು ಮಾಡುವ ಯೋಚನೆ ಮಾಡಿರಿ. ಖಂಡಿತವಾಗಿಯೂ ಇದರಿಂದ ಲಾಭ ಬಂದೇ ಬರುತ್ತದೆ. ನಿಮ್ಮ ಪುಣ್ಯ ಫಲ ನಿಮ್ಮ ಶ್ರೀರಕ್ಷೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...