alex Certify ಈ ದಿನ ಸೇವನೆ ಮಾಡಬೇಡಿ ಮಾವಿನ ಉಪ್ಪಿನಕಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಿನ ಸೇವನೆ ಮಾಡಬೇಡಿ ಮಾವಿನ ಉಪ್ಪಿನಕಾಯಿ

ಶನಿವಾರ ಶನಿದೇವರಿಗೆ ಮೀಸಲು. ಶನಿದೋಷ ನಿವಾರಣೆಗೆ ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಶನಿವಾರ ವೃತ ಮಾಡುವವರು ಕೆಲವರಾದ್ರೆ ಮತ್ತೆ ಕೆಲವರು ದೇವಸ್ಥಾನಕ್ಕೆ ಹೋಗಿ ಶನಿದೇವರ ದರ್ಶನ ಮಾಡ್ತಾರೆ. ಶನಿವಾರ ಅನೇಕ ಕೆಲಸಗಳನ್ನು ಮಾಡಬಾರದು. ಇದು ತೊಂದರೆಗೆ ಕಾರಣವಾಗುತ್ತದೆ.

ಶನಿವಾರ ಮಾವಿನಕಾಯಿ ಉಪ್ಪಿನಕಾಯಿ ಸೇವನೆ ಮಾಡಬಾರದು. ಶನಿವಾರ ಹುಳಿ ಪದಾರ್ಥ ಶುಭವಲ್ಲ. ಹಾಗಾಗಿ ಶನಿವಾರ ಹುಳಿ ಪದಾರ್ಥ ಹಾಗೂ ಉಪ್ಪಿನಕಾಯಿಯನ್ನು ತಿನ್ನಬಾರದು.

ಶನಿವಾರ ಕೆಂಪು ಮೆಣಸನ್ನು ಕೂಡ ತಿನ್ನಬಾರದು. ಇದು ಶನಿದೇವನಿಗೆ ಇಷ್ಟವಾಗುವುದಿಲ್ಲ. ಶನಿವಾರ ಕೆಂಪು ಮೆಣಸಿನ ಬದಲು ಊಟಕ್ಕೆ ಕಪ್ಪುಅಥವಾ ಹಸಿರು ಮೆಣಸಿನ ಸೇವನೆ ಮಾಡಬೇಕು.

ಶನಿವಾರ ಮದ್ಯದಿಂದ ದೂರವಿರಬೇಕು. ಮದ್ಯಸೇವನೆ ಪ್ರಾಣಕ್ಕೆ ಅಪಾಯ. ಶನಿವಾರ ಸೇವನೆ ಮಾಡಿದ್ರೆ ಈ ಅಪಾಯ ಹೆಚ್ಚು.

ಶನಿದೇವನಿಗೆ ಶನಿವಾರ ಸಾಸಿವೆ ಎಣ್ಣೆಯನ್ನು ಅರ್ಪಿಸುತ್ತಾರೆ. ಶನಿದೇವ ಸಾಸಿವೆ ಎಣ್ಣೆ ಪ್ರಿಯ. ಆದ್ರೆ ಶನಿವಾರ ಸಾಸಿವೆ ಎಣ್ಣೆಯಿಂದ ತಯಾರಿಸಿದ ಯಾವುದೇ ಪದಾರ್ಥವನ್ನು ತಿನ್ನಬಾರದು. ಸಾಸಿವೆ ಎಣ್ಣೆಯನ್ನು ದೇಹಕ್ಕೂ ಹಚ್ಚಿಕೊಳ್ಳಬಾರದು.

ಶನಿವಾರ ಬರಿ ಹಾಲು ಹಾಗೂ ಮೊಸರನ್ನು ಎಂದೂ ಸೇವನೆ ಮಾಡಬಾರದು. ಇದು ಶನಿದೇವರ ಕೋಪಕ್ಕೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...