alex Certify ಈ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಬೆಳಗಬೇಕು ಕರ್ಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಬೆಳಗಬೇಕು ಕರ್ಪೂರ

ಮನೆಯಲ್ಲಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ನಕಾರಾತ್ಮಕ ಶಕ್ತಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತೆ. ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಪ್ರತಿದಿನ ಮಾಡಬೇಕು.

ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಲು ಕರ್ಪೂರವನ್ನು ಬಳಸಬೇಕು. ಪ್ರತಿ ದಿನ ಮನೆಗೆ ಕರ್ಪೂರದ ಹೊಗೆ ತಾಗಿದ್ರೆ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ನಕಾರಾತ್ಮಕ ಶಕ್ತಿ ಇದ್ದರೆ ಮಾತ್ರ ಮನೆಯಲ್ಲಿ ಕರ್ಪೂರವನ್ನು ಹಚ್ಚಬೇಕೆಂದೇನಿಲ್ಲ. ಪ್ರತಿ ದಿನ ಕರ್ಪೂರವನ್ನು ಬೆಳಗಬೇಕು.

ಸೂರ್ಯ ಮುಳುಗಿದ ನಂತರ ಮನೆಯ ಪ್ರತಿಯೊಂದು ಕೋಣೆಗೂ ಕರ್ಪೂರದ ಹೊಗೆ ಹೋಗುವಂತೆ ನೋಡಿಕೊಳ್ಳಬೇಕು. ಸಂಜೆ ಕರ್ಪೂರಕ್ಕೆ ಲವಂಗ ಬೆರೆಸಿ ದೀಪ ಬೆಳಗಬೇಕು. ಇದು ನಕಾರಾತ್ಮಕ ಶಕ್ತಿ ಪ್ರಭಾವವನ್ನು ಕಡಿಮೆ ಮಾಡುತ್ತೆ. ಅನಾರೋಗ್ಯದಿಂದ ಬಳಲುತ್ತಿರುವವರು ಕರ್ಪೂರದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಬೇಕು. ಇದ್ರಿಂದ ಧನಾತ್ಮಕ ಪ್ರಭಾವ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...