alex Certify ಈರುಳ್ಳಿ ಬೆಳೆದ ರೈತರಿಗೆ ಬಿಗ್ ಶಾಕ್; ದರದಲ್ಲಿ ಭಾರಿ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಬೆಳೆದ ರೈತರಿಗೆ ಬಿಗ್ ಶಾಕ್; ದರದಲ್ಲಿ ಭಾರಿ ಕುಸಿತ

ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಕಷ್ಟು ಸಂಕಷ್ಟಕ್ಕೊಳಗಾಗುವ ರೈತರಿಗೆ ಉತ್ತಮ ಬೆಳೆ ಬಂದರೂ ನೆಮ್ಮದಿ ಇರುವುದಿಲ್ಲ. ನಿಶ್ಚಿತ ಬೆಲೆ ಇಲ್ಲದೆ ಬೆಳೆಗೆ ಅತ್ಯಂತ ಕಡಿಮೆ ದರ ಸಿಗುವ ಕಾರಣ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದೇ ಪರಿಸ್ಥಿತಿ ಈಗ ರಾಜ್ಯದ ಈರುಳ್ಳಿ ಬೆಳೆಗಾರರಿಗೆ ಬಂದಿದೆ.

ಈ ಬಾರಿ ರಾಜ್ಯದಲ್ಲಿ ಈರುಳ್ಳಿಯ ಉತ್ತಮ ಇಳುವರಿಯಾಗಿದ್ದು, ಜೊತೆಗೆ ನೆರೆಯ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರ ಪರಿಣಾಮ ರೈತರು ಅಸಹಾಯಕರಾಗಿ ಆಕಾಶ ನೋಡುವಂತಾಗಿದೆ.

ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 8 ರೂಪಾಯಿಗಳಿದ್ದರೆ ದೊಡ್ಡ ಈರುಳ್ಳಿ 20ರಿಂದ 25 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಈರುಳ್ಳಿ ಬೆಳೆದ ರೈತರಿಗೆ ಪ್ರತಿ ಕೆಜಿಗೆ ಕೇವಲ 5 ರಿಂದ 15 ರೂಪಾಯಿವರೆಗೆ ಸಿಗುವಂತಾಗಿದೆ. ಸಾಗಣೆ ವೆಚ್ಚ ಇವುಗಳೆಲ್ಲವನ್ನು ಪರಿಗಣಿಸಿದರೆ ರೈತರಿಗೆ ಅತ್ಯಲ್ಪ ಪ್ರಮಾಣದಲ್ಲಿ ಹಣ ಸಿಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...