alex Certify ಇಷ್ಟಪಟ್ಟಿರುವ ನೌಕರಿ ಪಡೆಯಲು ಪ್ರತಿ ದಿನ ಪಠಿಸಿ ‘ಹನುಮಾನ್ ಚಾಲೀಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟಪಟ್ಟಿರುವ ನೌಕರಿ ಪಡೆಯಲು ಪ್ರತಿ ದಿನ ಪಠಿಸಿ ‘ಹನುಮಾನ್ ಚಾಲೀಸ್’

ಹಿಂದೂ ಧರ್ಮದಲ್ಲಿ ಹನುಮಾನ್ ಚಾಲೀಸ್ ಮಂಗಳಕರ, ಪವಿತ್ರವೆಂದು ನಂಬಲಾಗಿದೆ. ಹನುಮಾನ್ ಚಾಲೀಸ್ ಓದುವುದು ಲಾಭದಾಯಕವೆಂದು ನಂಬಲಾಗಿದೆ. ಭಜರಂಗಬಲಿ ತನ್ನ ಭಕ್ತರಿಗೆ ಎಂದೂ ನಿರಾಸೆ ಮಾಡುವುದಿಲ್ಲ. ಬಹಳ ಸರಳ ಆರಾಧನೆ ಮಾಡಿದ್ರೆ ಸಾಕು, ಹನುಮಂತ ಭಕ್ತರಿಗೆ ಒಲಿಯುತ್ತಾನೆ.

ಕಲಿಯುಗದಲ್ಲಿ ಜಾಗೃತ ದೇವರು ಹನುಮಂತನೆಂದು ಹೇಳಲಾಗುತ್ತದೆ. ಭೂಮಿ ಹಾಗೂ ಮಾನವ ಜೀವಂತವಾಗಿರುವವರೆಗೂ ಇಲ್ಲಿ ಹನುಮಂತ ವಾಸವಾಗಿರುತ್ತಾನೆಂದು ನಂಬಲಾಗಿದೆ. ಹನುಮಂತನನ್ನು ಒಲಿಸಿಕೊಳ್ಳಲು ಹನುಮಾನ್ ಚಾಲೀಸ್ ಸಾಕು. ಪ್ರತಿ ದಿನ ಹನುಮಾನ್ ಚಾಲೀಸ್ ಪಠಣೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ.

ಹನುಮಾನ್ ಚಾಲೀಸ್ ಓದುವುದ್ರಿಂದ ಮನಸ್ಸಿನ ಅಶಾಂತಿ ಕಡಿಮೆಯಾಗುತ್ತದೆ. ಮನುಷ್ಯನ ಎಲ್ಲ ಭಯ ದೂರವಾಗುತ್ತದೆ. ನಕಾರಾತ್ಮಕ ವಿಷ್ಯದ ಬಗ್ಗೆ ಹೆಚ್ಚು ಆಲೋಚನೆ ಮಾಡುವ ವ್ಯಕ್ತಿ ಹನುಮಾನ್ ಚಾಲೀಸ್ ಓದಲು ಶುರು ಮಾಡಬೇಕು. ಸಾಕಷ್ಟು ಪರಿಶ್ರಮದ ನಂತ್ರವೂ ಯಶಸ್ಸು ಸಿಗದವರು ಕೂಡ ಹನುಮಾನ್ ಚಾಲೀಸ್ ಓದಲು ಶುರು ಮಾಡಿದ್ರೆ ಒಳ್ಳೆಯದು.

ಇಷ್ಟಪಟ್ಟಿರುವ ನೌಕರಿ ಕೈಗೆ ಸಿಗದೆ ಹೋದಲ್ಲಿ ಕೂಡ ಹನುಮಾನ್ ಚಾಲೀಸ್ ಓದಬೇಕು. ಹನುಮಾನ್ ಚಾಲೀಸ್ ಓದಿದ ನಂತ್ರ ಅದ್ರ ಪರಿಣಾಮ ನಿಮಗೆ ಕಾಣಿಸುತ್ತದೆ. ಮನೆಯಲ್ಲಿ ಜಗಳ, ಗಲಾಟೆ ಕಡಿಮೆಯಾಗಿ ಶಾಂತಿ, ನೆಮ್ಮದಿ ಲಭಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...