alex Certify ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದ್ರೆ ಮನೆ ಮುಂದೆ ಬೆಳೆಸಿ ಈ ಗಿಡ-ಮರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದ್ರೆ ಮನೆ ಮುಂದೆ ಬೆಳೆಸಿ ಈ ಗಿಡ-ಮರ

ಮನುಷ್ಯನಿಗೆ ಆಸೆ ಹೆಚ್ಚು. ಕೈ ತುಂಬಾ ಹಣ, ಆರೋಗ್ಯ, ಐಷಾರಾಮಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಕಷ್ಟಪಡ್ತಾರೆ. ಆದ್ರೆ ಎಷ್ಟು ದುಡಿದ್ರೂ ಕೆಲವರಿಗೆ ಸುಖ ಪ್ರಾಪ್ತಿಯಾಗುವುದಿಲ್ಲ. ಅದಕ್ಕೆ ಕಾರಣ ವಾಸ್ತು ದೋಷ. ನಮಗೆ ತಿಳಿಯದೆ ನಾವು ಮಾಡುವ ತಪ್ಪುಗಳು ನಮ್ಮ ಏಳ್ಗೆಯನ್ನು ತಡೆಯುತ್ತವೆ. ವಾಸ್ತು ದೋಷ ನಿವಾರಣೆಯಾಗಿ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದ್ರೆ ಮನೆ ಮುಂದೆ ಈ ಗಿಡವನ್ನು ಬೆಳೆಸಿ.

ಜೇಡ್ ಸಸ್ಯ: ಈ ಗಿಡ ಬೆಳೆಸುವುದ್ರಿಂದ ಮನೆಯಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ. ಇದು ಇದ್ದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ಇದನ್ನು ಲಕ್ಕಿ ಪ್ಲಾಂಟ್ ಎಂದು ಕರೆಯುತ್ತಾರೆ.

ಮನಿ ಟ್ರೀ: ಮನಿ ಟ್ರೀ ಮನೆಯಲ್ಲಿದ್ದರೆ ಸುಖ, ಸಮೃದ್ಧಿ ನೆಲೆಸಿರುತ್ತದೆ. ಕುಟುಂಬದ ಸದಸ್ಯರು ಸಂತೋಷವಾಗಿರುತ್ತಾರೆ. ಮನೆಯ ಸರಿಯಾದ ದಿಕ್ಕಿನಲ್ಲಿ ಇದನ್ನಿಡುವುದು ಮುಖ್ಯವಾಗುತ್ತದೆ.

ಲಕ್ಷ್ಮಣ ಗಿಡ: ಈ ಗಿಡ ಮನೆಯಲ್ಲಿದ್ದರೆ ಧನಲಕ್ಷ್ಮಿ ಆಗಮನವಾಗುತ್ತದೆ. ಮನೆಯ ಬಾಲ್ಕನಿಯಲ್ಲಿ ದೊಡ್ಡ ಪಾತ್ರೆಯಲ್ಲಿ ಇದನ್ನು ನೆಡಬೇಕು.

ಬಾಳೆ ಗಿಡ: ಹಿಂದೂ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಇದು ಸಮೃದ್ಧಿಯ ಸಂಕೇತ, ವಿಷ್ಣು ಮತ್ತು ಲಕ್ಷ್ಮಿ ವಾಸವಾಗಿರುತ್ತಾರೆಂಬ ನಂಬಿಕೆಯಿದೆ.

ತುಳಸಿ: ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವಿರುತ್ತದೆ. ತುಳಸಿ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುವಂತೆ ನೋಡಿಕೊಳ್ತಾಳೆ. ಸುಖ, ಶಾಂತಿ, ಸಂಪತ್ತು ವೃದ್ಧಿಗೆ ಕಾರಣವಾಗ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...